- Advertisement -
- Advertisement -
ಮಂಗಳೂರು; ಪ್ರಚಲಿತ ವಿದ್ಯಮಾನಗಳನ್ನು ಯಕ್ಷಗಾನ ಪ್ರಸಂಗಗಳಲ್ಲಿ ಪ್ರಸ್ತುತ ಪಡಿಸೋದು ಹೊಸದೇನಲ್ಲ. ಇದೀಗ ಅಂತಹದ್ದೇ ವಿದ್ಯಮಾನವೊಂದರ ಡೈಲಾಗ್ ಯಕ್ಷಗಾನದ ದೃಶ್ಯವೊಂದರಲ್ಲಿ ಬಂದು ವೈರಲ್ ಆಗಿದೆ.
ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಪ್ರಮುಖ ರಾಷ್ಟ್ರೀಯ ಪಕ್ಷವೊಂದರ ರಾಜ್ಯಾಧ್ಯಕ್ಷರು ಪಕ್ಷದ ಸಭೆಯೊಂದರಲ್ಲಿ ‘ಎಲ್ಲಾ ಕಡೆ ನೋಡ್ಕೊಂಡು ಬಂದಿದ್ದೇನೆ, ಯಾರಿಗೆ ಹೆಚ್ಚು ಚಪ್ಪಾಳೆ ಬೀಳುತ್ತೋ ಅವರಿಗೆ ಟಿಕೆಟ್ ಇಲ್ಲ.. ನಾನು ಅಧ್ಯಕ್ಷ..’ ಎಂಬ ಮಾತು ಆಮೇಲೆ ಚುನಾವಣಾ ಫಲಿತಾಂಶ ಬಂದ್ಮಲೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು.ಅದೇ ಡೈಲಾಗ್ ಇದೀಗ ಕಟೀಲು ಮೇಳದ ಯಕ್ಷಗಾನದ ಪ್ರಸಂಗವೊಂದರಲ್ಲಿ ಬಂದು ಬಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಆ ಮೂಲಕ ಪರೋಕ್ಷವಾಗಿ ಆ ಅಧ್ಯಕ್ಷರಿಗೆ ಟಾಂಗ್ ಕೊಡಲಾಗಿದೆ.
- Advertisement -