- Advertisement -
- Advertisement -
ಉಡುಪಿ : ಬಡಗತಿಟ್ಟು ಯಕ್ಷಗಾನ ರಂಗದ ಹಿರಿಯ ಕಲಾವಿದ ಶ್ರೀಪಾದ ಹೆಗಡೆ ಹಡಿನಬಾಳು (65) ಅನಾರೋಗ್ಯಯದಿಂದ ನಿನ್ನೆ ರಾತ್ರಿ ನಿಧರಾಗಿದ್ದಾರೆ.
ರಕ್ತದೊತ್ಡ ಕುಸಿತ ಸಮಸ್ಯೆಯಿಂದಾಗಿ ಅವರನ್ನು ಮಂಗಳವಾರ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.
ಶ್ರೀಪಾದ ಹೆಗಡೆ ಅವರು ರಾಜ್ಯದ ಎಲ್ಲ ಪ್ರಖ್ಯಾತ ಮೇಳಗಳಲ್ಲೂ ಅತಿಥಿ ಕಲಾವಿದರಾಗಿ ಪಾತ್ರ ಮಾಡುತ್ತಿದ್ದರು. ಇಡುಗುಂಜಿ ಮಹಾಗಣಪತಿ ಮೇಳದಲ್ಲಿ ಮೂಲ ಕಲಾವಿದರಾಗಿದ್ದರು. ಚಿಟ್ಟಾಣಿ ಹಾಗೂ ಮಹಾಬಲ ಹೆಗಡೆ ಕೆರೆಮನೆ ಅವರೊಂದಿಗೆ ಗೆ ಹಲವು ವರ್ಷಗಳ ಕಾಲ ಪಾತ್ರ ಮಾಡುವ ಮೂಲಕ ಮೆಚ್ಚುಗೆ ಗಳಿಸಿದ್ದರು.
- Advertisement -