- Advertisement -
- Advertisement -
ಉಡುಪಿ: ಹೋಟೇಲ್ ಮಾಲಿಕನ ಸ್ಕೂಟರ್ ನ್ನು ಸಿಬ್ಬಂದಿಯೇ ಕಳವು ಮಾಡಿರುವ ಘಟನೆ ಶಾಂತಿನಗರದಲ್ಲಿ ನಡೆದಿದೆ.
ಈ ಬಗ್ಗೆ ಸಂತೋಷ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಇವರು ಶಾಂತಿನಗರದಲ್ಲಿ ರೆಸ್ಟೋರೆಂಟ್ ವೊಂದನ್ನ ನಡೆಸಿಕೊಂಡಿದ್ದು , ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಶ್ರೀಧರ ಬೈಂದೂರು ಎಂಬಾತ ಹೋಟೇಲ್ನ ಡ್ರಾವರ್ ನಲ್ಲಿಟ್ಟಿದ್ದ ದ್ವಿಚಕ್ರ ವಾಹನದ ಕೀಯನ್ನು ತೆಗೆದುಕೊಂಡು ಮಾಲೀಕನಿಗೆ ತಿಳಿಯದಂತೆ ಹೋಟೇಲ್ನ ಹೊರಭಾಗದಲ್ಲಿ ನಿಲ್ಲಿಸಿದ್ದ ಸ್ಕೂಟರ್ ನ್ನು ಕಳವು ಮಾಡಿಕೊಂಡು ಹೋಗಿದ್ದಾನೆ.
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
- Advertisement -