- Advertisement -
- Advertisement -
ಹಾಸನ: ಜಿಲ್ಲೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿರುವ ಘಟನೆ ನಡೆದಿದೆ.
ಇನ್ನು ಕ್ರಿಕೆಟ್ ಬೆಟ್ಟಿಂಗ್ ನಿಂದಾಗಿ ದಾಂಪತ್ಯದಲ್ಲಿ ಬಿರುಕು ಮೂಡಿ ಪತ್ನಿಯನ್ನೇ ಪತಿ ಕೊಲೆಮಾಡಿರುವುದಾಗಿ ಆರೋಪಗಳು ಸಾವಿಗೀಡಾದ ಮಹಿಳೆಯ ಸಂಬಂಧಿಕರಿಂದಲೇ ಕೇಳಿಬರುತ್ತಲಿವೆ.
ಈ ಸಾವಿಗೆ ಪತಿಯೇ ಕಾರಣವೆಂದರು ಆರೋಪಿಸಿ, ಮಧು ಮನೆ ಮುಂದೆ ಶವವಿಟ್ಟು ಮಹಿಳೆ ಮನೆಯವರು ಪ್ರತಿಭಟನೆ ನಡೆಸಿದ್ದಾರೆ.
ಇನ್ನು ಸಾವಿಗೀಡಾದವರನ್ನು ತೇಜಸ್ವಿನಿ (28) ಎಂದು ಗುರುತಿಸಲಾಗಿದೆ. ಇನ್ನು ಈಕೆಯ ಪತಿಯೂ ಕ್ರಿಕೇಟ್ ಬೆಟ್ಟಿಂಗ್ ಗಾಗಿ 20 ಲಕ್ಷ ರೂಪಾಯಿಗೂ ಅಧಿಕ ಸಾಲ ಮಾಡಿಕೊಂಡಿದ್ದ ಇದನ್ನು ಕೇಳಿದ ಪತ್ತಿಯನ್ನು ಕೊಂದಿದ್ದಾಗಿ ಮಹಿಳೆಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
- Advertisement -