- Advertisement -
- Advertisement -
ಚಿಕ್ಕಮಗಳೂರು : ಜಮೀನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕಾಡುಕೋಣ ದಾಳಿಗೆ ಮೃತಪಟ್ಟಿದ್ದಾರೆ. ಸೋಮಶೇಖರ್ (45) ಮೃತ ದುರ್ದೈವಿ.
ಇವರು ಕಳಸ ತಾಲೂಕಿನ ತೋಟದೂರು ಸಮೀಪ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಕಾಡುಕೋಣ ದಾಳಿ ನಡೆಸಿದೆ. ಕೋಡಿನಿಂದ ತಿವಿದು ಕಾಡುಕೋಣ ಸೋಮಶೇಖರ್ ನನ್ನು ಕೊಂದಿದೆ.
ಕಾಡುಕೋಣ ಜನರಲ್ಲಿ ಆತಂಕ ಮೂಡಿಸಿದ್ದು, ಗ್ರಾಮದ ಜನ ಬೆಚ್ಚಿ ಬಿದ್ದಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -