- Advertisement -
- Advertisement -
ಉಡುಪಿ; ನೀರಿನ ಟ್ಯಾಂಕಿಗೆ ಬಿದ್ದ ಕಾಡುಕೋಣವನ್ನು ರಕ್ಷಣೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಶಂಕರನಾರಾಯಣ ಸಮೀಪದ ಶಾನ್ ಕಟ್ ಎಂಬಲ್ಲಿ ನಡೆದಿದೆ.
ಶ್ಯಾನ್ ಕಟ್ ನಿವಾಸಿ ಬಸವ ಶೆಟ್ಟಿ ಎಂಬವರ ಮನೆಯ ಟ್ಯಾಂಕಿಗೆ ಕಾಡುಕೋಣ ಬಿದ್ದಿತ್ತು.ಕೂಡಲೇ ಅವರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.ಬಳಿಕ ಜೆಸಿಬಿ ಸಹಾಯದಿಂದ ಕಾಡುಕೋಣ ಮೇಲೆ ಬಲರು ಅರಣ್ಯ ಇಲಾಖೆ ಸಿಬ್ಬಂದಿ ದಾರಿ ಮಾಡಿಕೊಟ್ಟಿದ್ದಾರೆ. ಅದರ ಸಹಾಯದಿಂದ ಕಾಡುಕೋಣ ಮೇಲೆ ಬಂದು ಕಾಡಿನತ್ತ ಓಡಿದೆ.
ಹಲಸಿನ ಹಣ್ಣು ತಿನ್ನಲು ತೋಟದೊಳಗೆ ಬಂದಿದ್ದ ಕಾಡುಕೋಣ ನೀರಿನ ಟ್ಯಾಂಕಿಗೆ ಬಿದ್ದಿದೆ ಎನ್ನಲಾಗಿದೆ.
- Advertisement -