- Advertisement -
- Advertisement -
ಚಿಕ್ಕಬಳ್ಳಾಪುರ: ದೇಶ ಕಾಯುವ ವಿಚಾರದಲ್ಲಿ ನಾವು ನಿಯತ್ತಿನ ನಾಯಿಗಳೇ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ಗುಡುಗಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿಎಂ ಬೊಮ್ಮಾಯಿ ಅವರನ್ನ ನಾಯಿಮರಿಗೆ ಹೋಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ನಾಯಿ ನಿಯತ್ತಿನ ಪ್ರಾಣಿ. ತುತ್ತು ಅನ್ನ ಹಾಕಿದ್ರೆ ಜೀವನಪರ್ಯಂತ ನಿಯತ್ತಾಗಿರುತ್ತೆ. ನಿಯತ್ತು ಇಲ್ಲದೇ ಇರೋರು ಕಾಂಗ್ರೆಸ್ನವರು. ಉಂಡ ಮನೆಗೆ ದ್ರೋಹ ಬಗೆಯುವವರು ಯಾರು ಅಂತಾ ಸಿದ್ದರಾಮಯ್ಯಗೆ ಗೊತ್ತು. ದೇಶ – ರಾಜ್ಯದ ಹಿತಾಸಕ್ತಿ ಪ್ರಶ್ನೆ ಬಂದಾಗ ನಾವೆಲ್ಲರೂ ರಾಜಾಹುಲಿಗಳು ಎಂದು ಸಿ.ಟಿ ರವಿ ಗುಡುಗಿದ್ದಾರೆ.
- Advertisement -