Saturday, June 28, 2025
Homeತಾಜಾ ಸುದ್ದಿಶಿವಮೊಗ್ಗ 'ಸ್ಪೋಟ' ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮಹಾ ದುರಂತಕ್ಕೆ ಕಾರಣ ಏನು..? ಯಾರು..?

ಶಿವಮೊಗ್ಗ ‘ಸ್ಪೋಟ’ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮಹಾ ದುರಂತಕ್ಕೆ ಕಾರಣ ಏನು..? ಯಾರು..?

spot_img
- Advertisement -
- Advertisement -

ಶಿವಮೊಗ್ಗ: ಹೊರವಲಯದ ಹುಣಸೋಡು ಬಳಿ ಡೈನಾಮೈಟ್ ಲಾರಿ ಸ್ಪೋಟಗೊಂಡು ಸುಮಾರು 15 ಮಂದಿ ಮೃತಪಟ್ಟಿದ್ದಾರೆ. ಹುಣಸೋಡು ಗ್ರಾಮಸ್ಥರು ಹೇಳುವ ಪ್ರಕಾರ ಬೊಲೆರೋ ವಾಹನದಲ್ಲಿ ಬಂದಿದ್ದ ವ್ಯಕ್ತಿಗಳು ಸ್ಫೋಟಕ ವಸ್ತುಗಳನ್ನ ಇಟ್ಟುಕೊಂಡು ಹೋಗುತ್ತಿದ್ದರು. ಅವರು ಬೀಡಿ, ಸಿಗರೇಟು ಹಚ್ಚಿಕೊಂಡಿದ್ದರು. ಇದೇ ಸ್ಫೋಟಕ್ಕೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.

ಅಂದ ಹಾಗೇ, ಈ ಸ್ಥಳದಲ್ಲಿ ಪರವಾನಿಗೆ ಇಲ್ಲದೇ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವುದು ಗೊತ್ತಾಗಿದೆ. 2016 ರಲ್ಲಿ ಪರವಾನಿಗೆ ಮುಗಿದಿದ್ದರೂ ಕೂಡ ಕಲ್ಲುಗಣಿ ಮಾಲೀಕ ಸುಧಾಕರ್ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದ ಎನ್ನುವುದು ಗೊತ್ತಾಗಿದೆ. ಮೂರು ವರ್ಷದ ಅವಧಿಗೆ ಕ್ರಷರ್ ಗಾಗಿ ಲೈಸೆನ್ಸ್ ಪಡೆದುಕೊಂಡಿದ್ದು, ಲೈಸೆನ್ಸ್ ಅವಧಿ ಮುಗಿದರೂ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿತ್ತು.

ಅನುಮತಿ ಇಲ್ಲದಿದ್ದರೂ, ಸ್ಪೋಟಕಗಳನ್ನು ಬಳಸಲಾಗಿದೆ. ಭಾರೀ ಪ್ರಮಾಣದಲ್ಲಿ ಡೈನಮೈಟ್ ಸಂಗ್ರಹಿಸಲಾಗಿತ್ತು. ಮೂರು ವರ್ಷಕ್ಕೆ ಲೈಸೆನ್ಸ್ ಪಡೆದುಕೊಂಡಿದ್ದ ಮಾಲೀಕ ಸುಧಾಕರ್, ಅವಧಿ ಮುಗಿದರೂ ಕ್ರಷರ್ ನಡೆಸುತ್ತಿರುವುದು ಗೊತ್ತಾಗಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಇನ್ನು ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮುಖಂಡ ಗಂಧದಮನೆ ನರಸಿಂಹ ಸೇರಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಜಮೀನು ಮಾಲೀಕ ಅವಿನಾಶ್ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಘಟನೆ ನಡೆದ ಸುತ್ತಮುತ್ತ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಕತ್ತಲು ಆವರಿಸಿದೆ. ಶಿವಮೊಗ್ಗ ಸುತ್ತಮುತ್ತ ಅಕ್ರಮ ಗಲ್ಲು ಗಣಿಗಾರಿಕೆ ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಿದ್ದು, ಕೆಲವೊಮ್ಮೆ ದಾಳಿ ಕೂಡ ನಡೆದಿತ್ತು. ಆದರೂ ಇದನ್ನು ಮೀರಿ ಈ ರೀತಿಯ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ಸ್ಥಳೀಯರು ಬದಲಾಗಿ ಬಿಹಾರಿ ಕಾರ್ಮಿಕರನ್ನೇ ಹೆಚ್ಚಾಗಿ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಹೀಗಾಗಿ ಈ ಘಟನೆಯಲ್ಲಿ ಮೃತಪಟ್ಟವರಲ್ಲಿ ಬಿಹಾರಿ ಕಾರ್ಮಿಕರೇ ಹೆಚ್ಚಾಗಿದ್ದಾರೆಂದು ಹೇಳಲಾಗುತ್ತಿದೆ.

- Advertisement -
spot_img

Latest News

error: Content is protected !!