ಉಡುಪಿ: ಕಾರ್ಕಳದಲ್ಲಿ ಹಿಂದೂ ಯುವತಿ ಮೇಲೆ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್, ಅಡಿಶನಲ್ ಎಸ್ಪಿ ಸಿದ್ಧಲಿಂಗಪ್ಪ, ಡಿವೈಎಸ್ ಪಿ ಅರವಿಂದ್ ಕಲ್ಗುಜ್ಜಿ ಅವರಿಂದ ಪ್ರಕರಣದ ಕುರಿತು ಅಮಿತ್ ಸಿಂಗ್ ಮಾಹಿತಿ ಪಡೆದಿದ್ದಾರೆ.
ಯುವತಿಗೆ ಮದ್ಯದಲ್ಲಿ ಮಾದಕ ವಸ್ತು ಮಿಶ್ರಣ ಮಾಡಿ ನೀಡಿ ಅತ್ಯಾಚಾರ ಮಾಡಲಾಗಿದ್ದು, ಯುವತಿಯಿಂದ ಇನ್ನಷ್ಟು ಮಾಹಿತಿ ಕಲೆ ಹಾಕಬೇಕಾಗಿದೆ, ಗ್ಯಾಂಗ್ ರೇಪ್ ಬಗ್ಗೆ ಇದುವರೆಗೆ ಸಂತ್ರಸ್ತೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಕಾರ್ಕಳದಲ್ಲಿ ಐಜಿಪಿ ಅಮಿತ್ ಸಿಂಗ್ ಮಾಹಿತಿ ನೀಡಿದ್ದಾರೆ.
ಅತ್ಯಾಚಾರ ಆರೋಪಿ ಅಲ್ತಾಫ್ ಸಂತ್ರಸ್ಥೆ ಜೊತೆ ಸುತ್ತಾಡಲು ಶಿವಮೊಗ್ಗ ನೋಂದಣಿಯ ವೆರ್ನಾ ಬಳಸಿದ್ದು, ಕಾರು ಸದ್ಯ ಕಾರ್ಕಳ ಪೊಲೀಸರ ವಶದಲ್ಲಿದೆ.
ಅಲ್ಲದೇ, ಪ್ರಕರಣದಲ್ಲಿ ಬಳಸಲ್ಪಟ್ಟಿರುವ ಇನ್ನೊಂದು ವಾಹನವನ್ನು ಕೂಡಾ ಕಾರ್ಕಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.