Friday, June 27, 2025
Homeಕರಾವಳಿಉಡುಪಿಕಾರ್ಕಳ: ಜಲ್ಲಿ ಕ್ರಶರ್ ಕಾರ್ಯಾಚರಣೆಗೆ ಗ್ರಾಮಸ್ಥರ ವಿರೋಧ:  ಕರ್ನಾಟಕ ರಾಜ್ಯ ರೈತ ಸಂಘದ ಬೆಂಬಲದೊಂದಿಗೆ ಪ್ರತಿಭಟನೆ

ಕಾರ್ಕಳ: ಜಲ್ಲಿ ಕ್ರಶರ್ ಕಾರ್ಯಾಚರಣೆಗೆ ಗ್ರಾಮಸ್ಥರ ವಿರೋಧ:  ಕರ್ನಾಟಕ ರಾಜ್ಯ ರೈತ ಸಂಘದ ಬೆಂಬಲದೊಂದಿಗೆ ಪ್ರತಿಭಟನೆ

spot_img
- Advertisement -
- Advertisement -

ಕಾರ್ಕಳ: ತಾಲೂಕಿನ ಅಜೆಕಾರು ಎಂಬಲ್ಲಿ ಕಾರ್ಯಾಚರಿಸುತ್ತಿರುವ ಜಲ್ಲಿ ಕ್ರಷರ್ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಗ್ರಾಮಸ್ಥರ ಪ್ರತಿಭಟನೆಗೆ ಕರ್ನಾಟಕ ರಾಜ್ಯ ರೈತ ಸಂಘ ಸಾಥ್ ನೀಡಿದೆ. ಜಲ್ಲಿ ಕ್ರಷರ್ ನಲ್ಲಿ ಸ್ಪೋಟಿಸಲು ಬಳಸುವ ಸ್ಫೋಟಕಗಳಿಂದ ಈ ಭಾಗದ ಅನೇಕ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿವೆ. ಮಾತ್ರವಲ್ಲ ,ಅಕ್ಕಪಕ್ಕದ ಕೃಷಿ ಜಮೀನಿಗೂ  ಕಲ್ಲಿನ ಪುಡಿ ಜೊತೆಗೆ ಕಲುಷಿತ ನೀರು ಹರಿದು ಹಾನಿಯುಂಟಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸ್ಥಳೀಯರಾದ  ಹರೀಶ್ ಶೆಟ್ಟಿ ಎಂಬುವರ ಮಾಲೀಕತ್ವದಲ್ಲಿ ಈ ಜಲ್ಲಿ ಕಲ್ಲಿನ ಕ್ರಷರ್  ನಡೆಯುತ್ತಿದ್ದು , ಕ್ರಷರ್ ಕಾರ್ಯಾಚರಣೆಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ತಹಶೀಲ್ದಾರ್ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

- Advertisement -
spot_img

Latest News

error: Content is protected !!