- Advertisement -
- Advertisement -
ಧರ್ಮಸ್ಥಳ; ನಟ ವಿಜಯರಾಘವೇಂದ್ರ ಪತ್ನಿ ಸಂದನಾ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಕಂಬನಿ ಮಿಡಿದಿದ್ದಾರೆ.
ಸ್ಪಂದನಾ ಕುಟುಂಬದವರು ನಮ್ಮ ಕ್ಷೇತ್ರದ ಭಕ್ತರೂ, ಆತ್ಮೀಯರೂ ಆಗಿದ್ದು, ಹಲವು ಬಾರಿ ಸಕುಟುಂಬಿಕರಾಗಿ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆದಿದ್ದಾರೆ. ಅವರ ಸರಳ ವ್ಯಕ್ತಿತ್ವ, ಕಲಾಭಿಮಾನ ಹಾಗೂ ಕಲಾ ಪೌಢಿಮೆ ಸ್ತುತ್ಯಾರ್ಹವಾಗಿದೆ. ಅವರ ಅಕಾಲಿಕ ನಿಧನ ಅಭಿಮಾನಿಗಳಿಗೆಲ್ಲಾ ಆಘಾತವನ್ನುಂಟುಮಾಡಿದೆ.ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಹಾಗೂ ಅವರ ಆಗಲುವಿಕೆಯಿಂದ ಕುಟುಂಬವರ್ಗದವರಿಗೂ, ಅಭಿಮಾನಿಗಳಿಗೂ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
- Advertisement -