Friday, May 17, 2024
Homeಕರಾವಳಿಉಡುಪಿದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ನ್ಯಾಯಾಧೀಶರ ವರ್ಗಾವಣೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ನ್ಯಾಯಾಧೀಶರ ವರ್ಗಾವಣೆ

spot_img
- Advertisement -
- Advertisement -

ಬೆಂಗಳೂರು: 117 ಸೀನಿಯರ್ ಸಿವಿಲ್ ಜಡ್ಜ್ ಗಳನ್ನು ವರ್ಗಾವಣೆ ಮಾಡಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ನಿನ್ನೆ ಆದೇಶ ಹೊರಡಿಸಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಸೀನಿಯರ್ ಸಿವಿಲ್ ಜಡ್ಜ್ ಗಳನ್ನು ಕೂಡಾ ವರ್ಗಾವಣೆ ಮಾಡಲಾಗಿದೆ.

ಪುತ್ತೂರು ಜೆಎಂಎಫ್ ಸಿ ಯ ಪ್ರಿಯಾ ರವಿ ಜೋಗ್ಲೇಕರ್ ವರ್ಗಾವಣೆಯಾಗಿದ್ದು ಅವರ ಸ್ಥಾನಕ್ಕೆ ಸೀನಿಯರ್ ಸಿವಿಲ್ ಜಡ್ಜ್ ಆಗಿ ಗೌಡ ಆರ್.ಪಿ. ನೇಮಕಗೊಂಡಿದ್ದಾರೆ. ಬೆಳ್ತಂಗಡಿ ಜೆಎಂಎಫ್ ಸಿ ಸೀನಿಯರ್ ಸಿವಿಲ್ ಜಡ್ಜ್ ಆಗಿ ದೇವರಾಜು ಹೆಚ್‌.ಎಂ. ನೇಮಕವಾಗಿದ್ದಾರೆ.

ಕುಂದಾಪುರ ಸೀನಿಯರ್ ಸಿವಿಲ್ ಜಡ್ಜ್ ಆಗಿದ್ದ ರಂಗೇಗೌಡ ಸಿ. ಕೋಲಾರ ಎರಡನೇ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ಆಗಿ ವರ್ಗಾವಣೆಯಾಗಿದ್ದಾರೆ. ಬೆಳ್ತಂಗಡಿ ಸೀನಿಯರ್ ಸಿವಿಲ್ ಜಡ್ಜ್ ಆಗಿದ್ದ ನಾಗೇಶ್ ಮೂರ್ತಿ ಬಿ.ಕೆ. ದೇವದುರ್ಗ ಜೆಎಂಎಫ್ ಸಿ ಸೀನಿಯರ್ ಸಿವಿಲ್ ಜಡ್ಜ್ ಆಗಿ ವರ್ಗಾವಣೆಯಾಗಿದ್ದಾರೆ‌.

ಮಂಗಳೂರು ಸಿಜೆಎಂ ಸೀನಿಯರ್ ಸಿವಿಲ್ ಜಡ್ಜ್ ಆಗಿದ್ದ ಶಿಲ್ಪಾ ಎ.ಜಿ. ಮಂಗಳೂರು ಒಂದನೇ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ಆಗಿ ವರ್ಗಾವಣೆಯಾಗಿದ್ದಾರೆ. ಕುಂದಾಪುರ ಸೀನಿಯರ್ ಸಿವಿಲ್ ಜಡ್ಜ್ ಆಗಿ ಕೆಎಸ್ ಸಿಡಿಆರ್ ಸಿ ಬೆಂಗಳೂರು ರಿಜಿಸ್ಟ್ರಾರ್ ಆಗಿದ್ದ ರಾಜು ಎನ್. ವರ್ಗಾವಣೆಯಾಗಿದ್ದಾರೆ.

ಮಂಗಳೂರು ಮೂರನೇ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ಆಗಿದ್ದ ಮಧುಕರ ಪಿ. ಭಾಗವತ್ ಮಂಗಳೂರು ಎರಡನೇ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ಆಗಿ ನೇಮಕಗೊಂಡಿದ್ದಾರೆ. ಮಂಗಳೂರು ಒಂದನೇ ಸೀನಿಯರ್ ಸಿವಿಲ್ ಜಡ್ಜ್ ಲಕ್ಷ್ಮೀ ಜಿ.ಎಂ. ಮಂಗಳೂರು ಮೂರನೇ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ಆಗಿ ವರ್ಗಾವಣೆಯಾಗಿದ್ದಾರೆ‌.

ಪುತ್ತೂರು ಪ್ರಧಾನ ಸೀನಿಯರ್ ಸಿವಿಲ್ ಜಡ್ಜ್ ಆಗಿದ್ದ ಪ್ರಿಯಾ ರವಿ ಜೋಗ್ಲೇಕರ್ ಪುತ್ತೂರು ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ಆಗಿ ನೇಮಕವಾಗಿದ್ದಾರೆ.

- Advertisement -
spot_img

Latest News

error: Content is protected !!