Friday, May 17, 2024
Homeಅಪರಾಧಸುಳ್ಯ :ಲಂಚ ಸ್ವೀಕರಿಸುತ್ತಿದ್ದಾಗ ಸುಳ್ಯ ಆರಂತೋಡು ಗ್ರಾಮದ ವಿಎ ಲೋಕಾಯುಕ್ತ ಬಲೆಗೆ

ಸುಳ್ಯ :ಲಂಚ ಸ್ವೀಕರಿಸುತ್ತಿದ್ದಾಗ ಸುಳ್ಯ ಆರಂತೋಡು ಗ್ರಾಮದ ವಿಎ ಲೋಕಾಯುಕ್ತ ಬಲೆಗೆ

spot_img
- Advertisement -
- Advertisement -

ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಆರಂತೋಡು ಗ್ರಾಮದ ಗ್ರಾಮ ಅಡಳಿತಾಧಿಕಾರಿ (VA) ಮಿಯಸಾಬ್ ಮುಲ್ಲ ಎಂಬಾತ ಲಂಚ ಪಡೆಯುವಾಗ ದಕ್ಷಿಣ ಕನ್ನಡ ಜಿಲ್ಲಾ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಖಾತೆ ಬದಲಾವಣೆಗಾಗಿ ಎನ್.ಓ.ಸಿ ನೀಡಲು ದೂರುದಾರ ಹರಿಪ್ರಸಾದ್ ಎಂಬವರಿಂದ ಮೊದಲು ವಿಎ 8 ಸಾವಿರಕ್ಕೆ ಡಿಮ್ಯಾಂಡ್ ಮಾಡಿದ್ದು ಅದರಂತೆ ಈ ಮೊದಲು 3 ಸಾವಿರ ಮುಂಗಡ ಪಡೆದಿದ್ದರು

ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು , ಅದರಂತೆ ದೂರುದಾರ ಹರಿಪ್ರಸಾದ್ ಇಂದು ಉಳಿದ 5 ಸಾವಿರ ನೀಡುವಾಗ ವಿಎ ಲೋಕಾಯುಕ್ತ ಬಲೆಗೆ ಬಿದಿದ್ದು,ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕಾರ್ಯಾಚರಣೆಯಲ್ಲಿ ದಕ್ಷಿಣ ಕನ್ನಡ ಲೋಕಾಯುಕ್ತ ಎಸ್ಪಿ ಟಿ.ಎ ಸೈಮಾನ್ , ಡಿವೈಎಸ್ಪಿ ಚೆಲುವರಾಜ್ ಮತ್ತು ಕಲಾವತಿ, ಇನ್ಸ್‌ಪೆಕ್ಟರ್ ಅಮಾನುಲ್ಲಾ ಮತ್ತು ಸಿಬ್ಬಂದಿಗಳು ಭಾಗಿಯಾಗಿದ್ದಾರೆ.

- Advertisement -
spot_img

Latest News

error: Content is protected !!