- Advertisement -
- Advertisement -
ಮಂಡ್ಯ: ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಮಹಿಳೆಯರಿಬ್ಬರ ಮೃತದೇಹ ನದಿಯಲ್ಲಿ ತೇಲಿ ಬಂದ ಘಟನೆ ಮಂಡ್ಯದ ಪಾಂಡವರಪುರದಲ್ಲಿ ನಡೆದಿದೆ.
ಮಹಿಳೆಯರ ಕಾಲು ಕಟ್ಟಿ ಅರ್ಧ ದೇಹ ಕಟ್ ಮಾಡಿರುವ ಹಂತಕರು, ಬರ್ಬರವಾಗಿ ಹತ್ಯೆ ಮಾಡಿ ನದಿಗೆ ಎಸೆದಿರುವುದು ಕಂಡು ಬಂದಿದೆ. ಇನ್ನೊಂದು ಕಡೆ ವಾಮಾಚಾರಕ್ಕೆ ಈ ರೀತಿ ಮಾಡಿದ್ದಾರಾ ಎಂಬ ಶಂಕೆ ವ್ಯಕ್ತವಾಗಿದೆ.
ಪಾಂಡವಪುರ ಠಾಣಾ ವ್ಯಾಪ್ತಿಯಲ್ಲಿ ಒಂದು ದೇಹ ಪತ್ತೆಯಾಗಿದ್ದು, ಶ್ರೀರಂಗಪಟ್ಟಣದ ಅರೆಕೆರೆ ಠಾಣೆ ವ್ಯಾಪ್ತಿಯಲ್ಲಿ ಮತ್ತೊಂದು ದೇಹ ಪತ್ತೆಯಾಗಿದೆ. ರುಂಡಗಳಿಲ್ಲದ ದೇಹಗಳು ಇದಾಗಿರುವ ಕಾರಣ ಪೊಲೀಸರಿಗೆ ರುಂಡ ಪತ್ತೆಯ ತಲೆನೋವು ಶುರುವಾಗಿದೆ. ಈ ಕುರಿತು ತನಿಖೆಗೆ ಎಸ್ಪಿ ವಿಶೇಷ ತನಿಖಾ ತಂಡ ರಚನೆ ಮಾಡಿದ್ದಾರೆ.
- Advertisement -