- Advertisement -
- Advertisement -
ಬಾಗಲಕೋಟೆ : ಮಾಜಿ ಸಚಿವೆ , ನಟಿ ಉಮಾಶ್ರೀ ಮನೆಯಲ್ಲಿ ಕಳ್ಳತನ ಮಾಡಿದ ಆರೋಪಿಗಳನ್ನು ಬಾಗಲಕೋಟೆ ಪೊಲೀಸರು ಒಂದು ವಾರದಲ್ಲಿ ಸೆರೆ ಹಿಡಿದಿದ್ದಾರೆ.
ಉಮಾಶ್ರೀ ಅವರ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ವಿದ್ಯಾನಗರದಲ್ಲಿರುವ ಮನೆಯಲ್ಲಿ ಕಳ್ಳತನ ಮಾಡಲಾಗಿತ್ತು. ಬಂಧಿತ ಆರೋಪಿಗಳನ್ನು ಯಲ್ಲಪ್ಪರೆಡ್ಡಿ, ದುರ್ಗಪ್ಪ ವಾಲ್ಮೀಕಿ ಎಂದು ಗುರುತಿಸಲಾಗಿದೆ.
ನವೆಂಬರ್ 2 ರಂದು ಉಮಾಶ್ರೀ ಅವರ ಮನೆ ಬಾಗಿಲು ಒಡೆದು ಕಳ್ಳರು ಒಳನುಗ್ಗಿದ್ದು, ಅಪಾರ ಪ್ರಮಾಣ ವಸ್ತು ಮತ್ತು ಹಣ ಕಳ್ಳತನ ಮಾಡಿದ್ದರು. ಘಟನೆ ಸಂಬಂಧ ತೆರೆದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
- Advertisement -