Friday, May 3, 2024
Homeಕರಾವಳಿಉಡುಪಿಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ:ಆಯ್ನಾಝ್ ಮೇಲಿನ ಪೊಸೆಸಿವ್ ನೆಸ್ ನಿಂದ ಒಂದೇ ಚಾಕುವಿನಲ್ಲಿ...

ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ:ಆಯ್ನಾಝ್ ಮೇಲಿನ ಪೊಸೆಸಿವ್ ನೆಸ್ ನಿಂದ ಒಂದೇ ಚಾಕುವಿನಲ್ಲಿ ನಾಲ್ವರನ್ನು ಹತ್ಯೆ ಮಾಡಿದ ಆರೋಪಿ ಪ್ರವೀಣ್ ಚೌಗುಲೆ:ಸುದ್ದಿಗೋಷ್ಠಿಯಲ್ಲಿ ಉಡುಪಿ ಎಸ್ಪಿ ಡಾ. ಅರುಣ್ ಮಾಹಿತಿ

spot_img
- Advertisement -
- Advertisement -

ಉಡುಪಿ: ನೇಜಾರು ಸಮೀಪ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಹಿಂದಿನ ಕಾರಣ ಬಹಿರಂಗವಾಗಿದೆ.ಉಡುಪಿ ಎಸ್ಪಿ ಅರುಣ್ ಇಂದು ಸುದ್ದಿಗೋಷ್ಠಿಯಲ್ಲಿ ಹತ್ಯೆಗೆ ಕಾರಣವಾದ ಅಂಶಗಳ ಬಗ್ಗೆ ಮಾಹಿತಿ ನೀಡಿದ್ದು, ಕೊಲೆಯಾದ ಆಯ್ನಾಝ್ ಮೇಲಿನ ಪೊಸೆಸಿವ್ ನೆಸ್ ನಿಂದಾಗಿ ಆರೋಪಿ ಪ್ರವೀಣ್ ಚೌಗುಲೆ ಕೊಲೆಗೆ ಪೂರ್ವ ಸಿದ್ದತೆ ಮಾಡಿಕೊಂಡಿದ್ದ ಎಂದು ಮಾಹಿತಿ ನೀಡಿದ್ದಾರೆ.

ಮೃತ ಅಯ್ನಾಝ್ ಮತ್ತು ಅರೋಪಿ ಪ್ರವೀಣ್ ಗೆ ಎಂಟು ತಿಂಗಳಿಂದ ಪರಿಚಯ ಇದ್ದು, ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಇಬ್ಬರ ಮಧ್ಯೆ ಗೆಳೆತನ ಇತ್ತಲ್ಲದೇ ಪ್ರವೀಣ್ ಆಯ್ನಾಝ್ ಗೆ ಹಲವು ಬಾರಿ ಸಹಾಯ ಮಾಡಿದ್ದಾನೆ.‌ ಆದರೆ ಅಯ್ನಾಝ್ ಅರೋಪಿ ಪ್ರವೀಣ್ ಜೊತೆ ತಿಂಗಳಿಂದ ಸರಿಯಾಗಿ ಮಾತನಾಡುತ್ತಿರಲಿಲ್ಲ. ಹೀಗಾಗಿ ಆ್ಯಪ್ ಲೊಕೇಷನ್ ಮೂಲಕ ಆಯ್ನಾಝ್ ಮನೆ ಪತ್ತೆ ಮಾಡಿದ್ದ ಪ್ರವೀಣ್, ಒಂದೇ ಚಾಕುವಿನಿಂದ ನಾಲ್ವರನ್ನೂ ಕೊಲೆ ಮಾಡಿದ್ದಾನೆ.‌

ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ಆರೋಪಿಗೆ ಆಶ್ರಯ ನೀಡಿದ್ದ ವ್ಯಕ್ತಿಯ ವಿಚಾರಣೆ ಮಾಡಿದ್ದು, ಆರೋಪಿಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಿ ಇಬ್ಬರು ಪೊಲೀಸರ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ ಎಂದು ಎಸ್ಪಿ ಅರುಣ್ ಹೇಳಿದ್ದಾರೆ.

ಪ್ರಕರಣದ ತನಿಖೆಗೆ ಸುಮಾರು 50 ಪೊಲೀಸರು ಕೆಲಸ ಮಾಡಿದ್ದು, ಆರೋಪಿಯನ್ನು ಪತ್ತೆ ಮಾಡಿದ ಪೊಲೀಸರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಉಡುಪಿ ಎಸ್ಪಿ ಡಾ. ಅರುಣ್ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!