- Advertisement -
- Advertisement -
ಉಡುಪಿ; ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ 72ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿಯವರಿಗೆ ಉಡುಪಿಯ ಚಿತ್ರ ಕಲಾವಿದರಾದ ಸ್ಪೂರ್ತಿ ಆಚಾರ್ ಮತ್ತು ಅಶ್ವತ್ಥ್ ಆಚಾರ್ಯ ವಿಶೇಷ ರೀತಿಯಲ್ಲಿ ಶುಭಾಶಯ ತಿಳಿಸಿದ್ದಾರೆ.
ಇಲ್ಲಿನ ಸಾಸ್ತಾನ ಚೆನ್ನಕೇಶವ ಹಾಲ್ ನಲ್ಲಿ ಈ ರಂಗೋಲಿಯಲ್ಲಿ ಭಾವಚಿತ್ರ ಬಿಡಿಸುವ ಮೂಲಕ ವಿಶೇಷ ಗೌರವ ಸಲ್ಲಿಸಿದ್ದಾರೆ. ಸುಮಾರು 12 ಅಡಿ ಎತ್ತರ 7.5 ಅಡಿ ಅಗಲವಾಗಿರುವ ಈ ರಂಗೋಲಿ ಬಿಡಿಸಲು ಕಲಾವಿದರು ಸುಮಾರು 15 ಗಂಟೆಗಳ ಕಾಲ ಶ್ರಮ ವಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಕ್ಕಾಗಿಯೇ ಸಿದ್ಧವಾದ ಈ ರಂಗೋಲಿ, ಸದ್ಯ ಎಲ್ಲರ ಕೇಂದ್ರ ಬಿಂದುವಾಗಿದೆ.
- Advertisement -