ಮುಂಬೈ: ‘ಉದ್ಧವ್ ಠಾಕ್ರೆ ಕಪಾಳಕ್ಕೆ ಹೊಡೆಯುತ್ತಿದ್ದೆ’ ಎಂದು ಹೇಳಿದ ಕೇಂದ್ರ ಸಚಿವ ನಾರಾಯಣ ರಾಣೆ ಬಂಧನದ ಬೆನ್ನಲ್ಲೇ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಉದ್ಧವ್ ಠಾಕ್ರೆ ಹೇಳಿದ್ದ ಹಳೇ ವಿಡಿಯೋ ವೈರಲ್ ಆಗಿದೆ.
ಯೋಗಿ ಆದಿತ್ಯನಾಥ್ ಒಬ್ಬ ಯೋಗಿ, ಹೇಗೆ ತಾನೇ ಸಿಎಂ ಆಗಲು ಸಾಧ್ಯ. ಇವರು ರಾಜಕೀಯ ತೊರೆದು ಗುಹೆಯಲ್ಲಿ ಕೂರಬೇಕು. ಶಿವಾಜಿಯ ಪಟ್ಟಾಭಿಷೇಕಕ್ಕೆ ಉತ್ತರ ಪ್ರದೇಶದಿಂದ ಪುರೋಹಿತರು ಬಂದಿದ್ದರು. ಈ ಸಂದರ್ಭದಲ್ಲಿ ಶಿವಾಜಿಗೆ ಹೂಮಾಲೆ ಹಾಕುವಾಗ ಯೋಗಿ ಚಪ್ಪಲಿ ಹಾಕಿಕೊಂಡಿದ್ದರು. ಅದೇ ಚಪ್ಪಲಿ ತೆಗೆದುಕೊಂಡು ಯೋಗಿಗೆ ಹೊಡೆಯಬೇಕು ಎಂದು ಠಾಕ್ರೆ ನೀಡಿದ ಹೇಳಿಕೆಯ ವಿಡಿಯೋವನ್ನು ಈಗ ವೈರಲ್ ಮಾಡಲಾಗಿದೆ.
ಈ ಹಿಂದೆ ಉದ್ಧವ್ ಠಾಕ್ರೆಗೆ ಕಪಾಳಕ್ಕೆ ಹೊಡೆಯುತ್ತಿದ್ದೆ ಎಂದು ನಾರಾಯಣ ರಾಣೆ ವಿವಾದ ಸೃಷ್ಟಿಸಿದ್ದರು. ಶಿವಸೇನಾ ಕಾರ್ಯಕರ್ತರ ಭಾರಿ ಪ್ರತಿಭಟನೆ ಕಾರಣ ರಾಣೆ ಬಂಧನವಾಯ್ತು. ಈ ಬೆನ್ನಲ್ಲೇ ಯೋಗಿ ಆದಿತ್ಯನಾಥ್ಗೆ ಚಪ್ಪಲಿಯಿಂದ ಹೊಡೆಯಬೇಕು ಎಂದು ಠಾಕ್ರೆ ನೀಡಿದ್ದ ಹೇಳಿಕೆಯನ್ನು ಬಿಜೆಪಿ ವೈರಲ್ ಮಾಡಿದೆ. ಅಲ್ಲದೇ ಠಾಕ್ರೆ ಹೇಳಿಕೆ ರಾಣೆ ಕೊಟ್ಟ ಹೇಳಿಕೆಗಿಂತ ಹೇಗೆ ಭಿನ್ನ ಎಂದು ಬಿಜೆಪಿ ಪ್ರಶ್ನಿಸಿದೆ.