- Advertisement -
- Advertisement -
ಉಪ್ಪಿನಂಗಡಿ: ಕಾನ್ವೆಂಟ್ ವಠಾರಕ್ಕೆ ಅಕ್ರಮವಾಗಿ ಪ್ರವೇಶಿಸಿ ಮಹಿಳೆಯೋರ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ವ್ಯಕ್ತಿಯೋರ್ವರಿಗೆ ಜೀವ ಬೆದರಿಕೆ ಹಾಕಿದ ಘಟನೆ ನೆಲ್ಯಾಡಿ ಸಮೀಪದ ಕೌಕ್ರಾಡಿ ಬೆಥನಿ ಕಾನ್ವೆಂಟ್ ನಲ್ಲಿ ನಡೆದಿದೆ.
ಈ ಬಗ್ಗೆ ಕಾನ್ವೆಂಟಿನ ಸಿಸ್ಟರ್ ನೀಡಿದ ದೂರಿನಂತೆ ಪೊಲೀಸರು ಕಡಬ ಸಮೀಪದ ಪೇರಡ್ಕದ ಸದ್ದಾಂ ಮತ್ತು ಇಸ್ಮಾಯಿಲ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.
ಕಾನ್ವೆಂಟಿಗೆ ಅಕ್ರಮ ಪ್ರವೇಶ ಮಾಡಿದ ವೇಳೆ ಸಿಸ್ಟರ್ ಪ್ರಶ್ನಿಸಿದ್ದು ಈ ವೇಳೆ ಅವಾಚ್ಯವಾಗಿ ಬೈದಿದ್ದಾರೆ. ಚರ್ಚ್ ನಲ್ಲಿ ಸಭೆ ನಡೆಯುತ್ತಿದ್ದ ಕಾರಣ ಬೊಬ್ಬೆ ಕೇಳಿ ಸೋನು ಜಾರ್ಜ್ ಎಂಬವರು ಅಲ್ಲಿಗೆ ಬಂದಾಗ ಅವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
- Advertisement -