Tuesday, April 30, 2024
Homeಕರಾವಳಿಬೆಳ್ತಂಗಡಿಗೆ ಹೋಗಿ‌ ಬರುವುದಾಗಿ‌ ಮನೆಯಿಂದ‌ ಹೇಳಿ ಹೋದ ವ್ಯಕ್ತಿ ನಾಪತ್ತೆ

ಬೆಳ್ತಂಗಡಿಗೆ ಹೋಗಿ‌ ಬರುವುದಾಗಿ‌ ಮನೆಯಿಂದ‌ ಹೇಳಿ ಹೋದ ವ್ಯಕ್ತಿ ನಾಪತ್ತೆ

spot_img
- Advertisement -
- Advertisement -

ಬೆಳ್ತಂಗಡಿಗೆ; ವ್ಯಕ್ತಿಯೊಬ್ಬರು‌ ಬೆಳ್ತಂಗಡಿಗೆ  ಹೋಗಿ‌ ಬರುವುದಾಗಿ‌ ಹೇಳಿ ಹೋಗಿ‌ ನಾಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕು ಓಡಿಲ್ನಾಳ ಗ್ರಾಮ ಸಂಬೋಳ್ಯ ಎಂಬಲ್ಲಿ  ನಡೆದಿದೆ.

ಶೇಖರ್  ಶೆಟ್ಟಿಗಾರ್ (53) ನಾಪತ್ತೆಯಾದವರು.  ಶೇಖರ್ ಶೆಟ್ಟಿಗಾರ ಅವರು ದಿನಾಂಕ;21-09-2022 ರಂದು ಬೆಳಿಗ್ಗೆ 09.00 ಗಂಟೆಗೆ  ಬೆಳ್ತಂಗಡಿ ಕಡೆ ಹೋಗುವುದಾಗಿ  ಮನೆಯಲ್ಲಿ ಹೇಳಿ ಹೋದವರು ಸಂಜೆಯದರೂ ಮನೆಗೆ ಬಂದಿಲ್ಲ. ಹೀಗಾಗಿ ಸಂಬಂಧಿಕರಲ್ಲಿ ಹಾಗೂ ನೆರೆಹೊರೆಯವರಲ್ಲಿ ಮನೆಯವರು ವಿಚಾರಿಸಿದ್ದಾರೆ. ಆದರೆ ಎಲ್ಲಿಯೂ ಪತ್ತೆಯಾಗಿರುವುದಿಲ್ಲ.

ಈ ಮೊದಲು ಕೂಡಾ  ಅವರು ಮನೆಯಿಂದ ಹೋದವರು 2-3 ದಿನಗಳ ನಂತರ ಮನೆಗೆ ಬರುತ್ತಿದ್ದು  ಅದೇ ರೀತಿಯಾಗಿ ಮನೆಗೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದರು.   ಆದರೆ ನಿನ್ನೆಯವರೆಗೆ   ಮನೆಗೆ ಬಾರದೇ ಇರುವುದರಿಂದ ಅವರ ಪುತ್ರ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -
spot_img

Latest News

error: Content is protected !!