ಬೆಂಗಳೂರು: ನೆಲಮಂಗಲದ ವಧು ಕಿಡ್ನಾಪ್ ಪ್ರಕರಣ ಇದೀಗ ಬೇರೆ ರೀತಿ ತಿರುವು ಪಡೆದುಕೊಂಡಿದ್ದು, ನನ್ನ ಯಾರೂ ಕಿಡ್ನಾಪ್ ಮಾಡಿಲ್ಲ. ನಾನೇ ನನ್ನ ಅಪ್ಪ, ಅಣ್ಣನ ಜೊತೆಗೆ ಬಂದಿದ್ದೇನೆ ಎಂದು ಕಿಡ್ನಾಪ್ ಆದ ನವ ವಧುವೇ ಹೇಳಿಕೊಂಡಿದ್ದಾಳೆ.
ಮಾಧ್ಯಮಗಳ ಜೊತೆ ಮಾತನಾಡಿದ ಜಲಜ, ಗಂಗಾಧರಯ್ಯನ ಜೊತೆ ನಾನು ಮದುವೆಯಾಗಿದ್ದು, ಕೂಡ ಭಯ ಹಾಗೂ ಬಲವಂತದಿಂದಾಗಿದ್ದೇನೆ. ಈ ಹಿಂದೆ ಅವನು ನನ್ನ ಕುಟುಂಬಕ್ಕೆ ಆಸಿಡ್ ಹಾಕಿ ಕೊಲೆ ಮಾಡುವ ಬೆದರಿಕೆ ಹಾಕಿದ್ದನು. ಮದುವೆಯಾಗದಿದ್ದರೆ ನಿಮ್ಮ ಕುಟುಂಬಕ್ಕೆ ಆಸಿಡ್ ಹಾಕುವುದಾಗಿ ಬೆದರಿಕೆ ಒಡ್ಡಿದ್ದನು ಎಂದು ಹೇಳಿದ್ದಾಳೆ.
ಆತ ನನ್ನ ಬಲವಂತವಾಗಿ ಕರೆದುಕೊಂಡು ಹೋಗಿದ್ದನು. ನಂತರದಲ್ಲಿ ಪ್ರತಿ ಗಂಟೆ ಗಂಟೆಗೆ ಜಾಗ ಮನೆ ಬದಲಾವಣೆ ಮಾಡುತಿದ್ದನು. ನನ್ನ ಅಪ್ಪ, ಅಮ್ಮ ಚೆನ್ನಾಗಿರಲಿ ಅನ್ನುವ ಒಂದೇ ಒಂದು ಕಾರಣಕ್ಕೆ ನಾನು ಆತನ ಜೊತೆಗಿದ್ದೆ. ಇದೀಗ ಮದುವೆಯಾಗಿ ಪೊಲೀಸ್ ಠಾಣೆಗೆ ನಾವು ಬಂದ ವೇಳೆ ವರನು ನನಗೆ ಚಿತ್ರಹಿಂಸೆ ಕೊಡುವ ಬಗ್ಗೆ ನಮ್ಮ ತಂದೆ ಸ್ನೇಹಿತರಿಗೆ ತಿಳಿಸಿದ್ದೇನು. ನನ್ನ ತಂದೆ ಬಂದಾಗ ನಾನೇ ಓಡಿಹೋಗಿ ಕಾರಲ್ಲಿ ಕುಳಿತೆ. ನನ್ನ ಯಾರೂ ಕಿಡ್ನಾಪ್ ಮಾಡಿಲ್ಲ. ಅವರ ಕುಟುಂಬ ಸರಿ ಇಲ್ಲ ಎಂದಿದ್ದಾಳೆ.
ನಾನು ಅವನನ್ನು ನಿಜವಾಗಿಯೂ ಪ್ರೀತಿ ಮಾಡುತ್ತಿದ್ದೆ. ಆದರೆ ಅವನು ಇಂತಹ ಲೋಫರ್ ಅಂತ ನನಗೆ ಗೊತ್ತಿರಲಿಲ್ಲ. ಅವನ ಫೋನ್ ನೋಡಿದ ಮೇಲೆ ಗೊತ್ತಾಯಿತು. ಅವನಿಗೆ ಈ ಮೊದಲು ಇಬ್ಬರು ಮೂವರ ಜೊತೆಗೆ ಸಂಬಂಧ ಇತ್ತು. ಅದನ್ನು ನೋಡಿದ ಮೇಲೆ ಮತ್ತೆ ವರನ ಕುಟುಂಬ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿತ್ತು. ನನ್ನನ್ನು ಕಿಡ್ನಾಪ್ ಮಾಡಲು ಯಾವುದೇ ಗೂಂಡಾಗಳು ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.