ಸುಳ್ಯ : ತೊಡಿಕಾನ-ಮಾಪಳಕಜೆ -ಕುದುರೆಪಾಯ ರಸ್ತೆ ಅಭಿವೃದ್ದಿಗೆ ರೂ.10 ಲಕ್ಷ ಅನುದಾನ ಮಂಜೂರುಗೊಂಡಿದೆ ಎಂದು ಶಾಸಕ ಅಂಗಾರ ಹೇಳಿದರು.
ಅವರು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಯಲ ಬಳಿಯ ಮತ್ಸ್ಯ ತೀರ್ಥ ಹೊಳೆಗೆ ಸಂಸದೆ ನಿರ್ಮಾಲಾ ಸೀತರಾಮ್ ಹಾಗೂ ಶಾಸಕರ ಹೆಚ್ಚುವರಿ ಅನುದಾನದಿಂದ ನಿರ್ಮಾಣವಾದ ಸೇತುವೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈಗ ಮಂಜೂರಾದ ಕಾಮಗಾರಿ ನಡೆಸಲು ಆರ್ಥಿಕ ಇಲಾಖೆಯ ಅನುಮಮತಿ ಅಗತ್ಯವಾಗಿದ್ದು ಇದರಿಂದ ಮಂಜೂರಾದ ಕಾಮಗಾರಿ ನಡೆಸಲು ಒಂದಷ್ಟು ವಿಳಂಬವಾಗುತ್ತಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ನೀಲಾವತಿ ಕೊಡಂಕೇರಿ, ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ, ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ತಾಲೂಕು ಪಂಚಾಯತ್ ಸದಸ್ಯೆ ಪುಷ್ಪಾಮೇದಪ್ಪ, ಅರಂತೋಡು-ತೊಡಿಕಾನ ವ್ಯವಸಾಯ ಸೇವ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಎಪಿಎಂಸಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ತೊಡಿಕಾನ ಮಲ್ಲಿಕಾರ್ಜುನ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ,ಸದಸ್ಯರು, ಮಾಜಿ ಅಧ್ಯಕ್ಷ ಕಿಶೋರ್ಕುಮಾರ್ ಉಳುವಾರು,ಮಾಜಿ ಸದಸ್ಯರು, ದೇವಳದ ಸಿಬ್ಬಂದಿಗಳು, ತೊಡಿಕಾನ ಶ್ರೀ ಮಲ್ಲಿಕಾರ್ಜುನ ಭಜನಾ ಸಂಘದ ಅಧ್ಯಕ್ಷ ಜನಾರ್ಧನ ಬಾಳೆಕಜೆ,ಭಾರತೀಯ ಜನತಾ ಪಾರ್ಟಿ ಅರಂತೋಡು ವಲಯ ಶಕ್ತಿ ಕೇಂದ್ರ ಕಾರ್ಯದರ್ಶಿ ಭಾರತಿ ಪುರುಶೋತ್ತಮ್, ತೊಡಿಕಾನ ಬೂತ್ ಸಮಿತಿ ಅಧ್ಯಕ್ಷ ಪ್ರಶಾಂತ್ ಕೆ.ಸಿ. ಕಾರ್ಯದರ್ಶಿ ಪ್ರಶಾಂತ್ ಕುಂಟುಕಾಡು, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹನುಮಂತರಾಯಪ್ಪ, ಜೂನಿಯರ್ ಇಂಜಿನಿಯರ್ ಮಣಿಕಂಠ ಊರವರು ಉಪಸ್ಥಿತರಿದ್ದರು.