ಚೆನ್ನೈ: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಪಿಟೀಲು ವಾದಕ ಟಿ.ಎನ್. ಕೃಷ್ಣನ್ (92) ಅವರು ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಟಿ.ಎನ್. ಕೃಷ್ಣನ್ ಅವರು ತಮ್ಮ ಚೆನ್ನೈನ ನಿವಾಸದಲ್ಲಿ ಇಂದು ನಿಧನರಾದರು.
ಪ್ರಧಾನಿ ಮೋದಿ ಟ್ವೀಟರ್ ನಲ್ಲಿ ಕೃಷ್ಣನ್ ನಿಧನಕ್ಕೆ ಶೋಕ ವ್ಯಕ್ತ ಪಡಿಸಿದ್ದಾರೆ.ಟಿ.ಎನ್. ಕೃಷ್ಣನ್ ಅವರಿಗೆ 1974 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. 2006 ರಲ್ಲಿ ಅಕಾಡೆಮಿಯಿಂದ ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ ಪಡೆದ ಇವರು 1980 ರಲ್ಲಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಿಂದ ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ಪಡೆದರು . ಚೆನ್ನೈನ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿ ಇವರಿಗೆ 1999 ರ ಸಂಗೀತ ಕಲಾಶಿಖಮಣಿ ಪ್ರಶಸ್ತಿಯನ್ನು ನೀಡಿದೆ.
ಟ್ವೀಟ್ ಮಾಡಿರುವ ಪ್ರಧಾನಿ “ತಮ್ಮ ಪಿಟೀಲು ವಾದನದ ಮೂಲಕ ನಮ್ಮ ಸಂಸ್ಕೃತಿಯ ವ್ಯಪಾಕವಾದ ಭಾವನೆಗಳನ್ನು ಮತ್ತು ಎಳೆಗಳನ್ನು ಸುಂದರವಾಗಿ ಬಿಡಿಸಿದ್ದ ಟಿ.ಎನ್. ಕೃಷ್ಣನ್ ಅವರು ದೇಶಕಂಡ ಖ್ಯಾತ ಪಿಟೀಲು ವಾದಕ. ಕುಟುಂಬ ಮತ್ತು ಅಭಿಮಾನಿಗಳಿಗೆ ಅವರ ಸಾವಿನ ನೋವು ತಡೆಯುವ ಶಕ್ತಿ ದೊರೆಯಲಿ”ಎಂದು ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.