- Advertisement -
- Advertisement -
ಮಡಿಕೇರಿ: ಜಲಪಾತದಲ್ಲಿ ಮುಳುಗಿ ಮೂವರು ನೀರು ಪಾಲಾಗಿ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಸೋಮವಾರಪೇಟೆ ತಾಲ್ಲೂಕಿನ ಕೋಟೆ ಅಬ್ಬಿ ಜಲಪಾತದಲ್ಲಿ ಘಟನೆ ಸಂಭವಿಸಿದೆ.
ತೆಲಂಗಾಣ ರಾಜ್ಯದಿಂದ ಪ್ರವಾಸ ಬಂದಿದ್ದ ತಂಡ ಜಲಪಾತದಲ್ಲಿ ಸ್ನಾನಕ್ಕಿಳಿದಾಗ ದುರ್ಘಟನೆ ನಡೆದಿದೆ.
ಜಲಪಾತದಲ್ಲಿ ಮುಳುಗಿ ಮೃತಪಟ್ಟವರನ್ನು
ಶ್ಯಾಮ (36), ಶಹೀಂದ್ರ (16) ಮತ್ತು ಶ್ರೀಹರ್ಷ (18) ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ಸೋಮವಾರಪೇಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -