Friday, May 17, 2024
Homeತಾಜಾ ಸುದ್ದಿಜೈಲಿಗೆ ಹೋಗ್ಬೇಕು ಅಂತಾ ಮೋದಿಯನ್ನು ಕೊಲ್ಲದಾಗಿ ಬೆದರಿಕೆ ಹಾಕಿದ ಭೂಪ: ಕೊನೆಗೂ ಈಡೇರಿತು ಯುವಕನ...

ಜೈಲಿಗೆ ಹೋಗ್ಬೇಕು ಅಂತಾ ಮೋದಿಯನ್ನು ಕೊಲ್ಲದಾಗಿ ಬೆದರಿಕೆ ಹಾಕಿದ ಭೂಪ: ಕೊನೆಗೂ ಈಡೇರಿತು ಯುವಕನ ಕಾರಾಗೃಹ ಸೇರೋ ಬಯಕೆ

spot_img
- Advertisement -
- Advertisement -

ನವದೆಹಲಿ: ಪೊಲೀಸ್ ನಿಯಂತ್ರಣ ಕೊಠಡಿಗೆ (ಪಿಸಿಆರ್) ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ 22 ವರ್ಷದ ಯುವಕನನ್ನು ಈಶಾನ್ಯ ದೆಹಲಿಯ ಖಜುರಿ ಖಾಸ್ ಪ್ರದೇಶದಲ್ಲಿ ಬಂಧಿಸಲಾಗಿದೆ.

ಸಲ್ಮಾನ್ ಅಲಿಯಾಸ್ ಅರ್ಮಾನ್ ಎಂದು ಗುರುತಿಸಲ್ಪಟ್ಟ ಆರೋಪಿ ಜೈಲಿಗೆ ಹೋಗಲು “ಬಯಸಿದ್ದರಿಂದ” ಕರೆ ಮಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.ಆರೋಪಿ ಸಲ್ಮಾನ್ ಮಾದಕ ವ್ಯಸನಿಯಾಗಿದ್ದು, ಬಾಲಾಪರಾಧಿಗಳ ಪರಿವರ್ತನಾ ಕೇಂದ್ರದಿಂದ ಬಿಡುಗಡೆ ಮಾಡಲಾಗಿತ್ತು. ಅವನನ್ನು 2018 ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಅಲ್ಲಿಗೆ ಕಳಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಆರೋಪಿ ಗುರುವಾರ ಮಧ್ಯರಾತ್ರಿ ಸುಮಾರಿಗೆ 112 ಕ್ಕೆ ಪಿಸಿಆರ್‌ಗೆ ಕರೆ ಮಾಡಿ ಪ್ರಧಾನಿ ಮೋದಿಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕರೆ ಸ್ವೀಕರಿಸಿದ ಸಂಖ್ಯೆಯನ್ನು ತಕ್ಷಣವೇ ಪತ್ತೆ ಹಚ್ಚಿ ಜಿಲ್ಲಾ ಪೊಲೀಸ್ ಘಟಕದೊಂದಿಗೆ ಹಂಚಿಕೊಳ್ಳಲಾಗಿದ್ದು, ನಂತರ ಆತನನ್ನು ಖಜುರಿ ಖಾಸ್‌ ನಲ್ಲಿ ಪತ್ತೆ ಹಚ್ಚಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಕರೆ ಮಾಡುವ ಸಮಯದಲ್ಲಿ ಸಲ್ಮಾನ್ ಡ್ರಗ್ಸ್ ಪ್ರಭಾವಕ್ಕೆ ಒಳಗಾಗಿದ್ದ. ರಾತ್ರಿ 10 ರ ಸುಮಾರಿಗೆ ಆತನ ತಂದೆ ಅವನಿಗೆ ಗದರಿದ್ದರು. ವಿಚಾರಣೆ ವೇಳೆ, ಜೈಲಿಗೆ ಹೋಗಲು “ಬಯಸಿದ್ದರಿಂದ” ಕರೆ ಮಾಡಿದ್ದಾಗಿ ಆ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ.

ಆತ ಜೈಲಿಗೆ ಹೋಗಲು ಏಕೆ ಬಯಸುತ್ತಾನೆ ಎಂದು ಕೇಳಿದಾಗ, “ವಹಿ ಮನ್ ಲಗ್ತಾ ಹೈ ಮೇರಾ (ನಾನು ಅಲ್ಲಿರಲು ಇಷ್ಟಪಡುತ್ತೇನೆ)” ಎಂದು ಹೇಳಿದ್ದಾನೆ. ಇದೀಗ ತನ್ನ ಆಸೆಯಂತೆ ಆತ ಜೈಲು ಸೇರಿದ್ದು ಪೊಲೀಸರು ಆತನ ವಿಚಾರಣೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!