- Advertisement -
![]()
- Advertisement -
ಉಡುಪಿ: ಭಟ್ಕಳದಿಂದ ಕಳವು ಮಾಡಲ್ಪಟ್ಟಿದ್ದ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಕಾರಿನ ಮಾಲೀಕ ಮತ್ತು ಪೊಲೀಸರು ಬೈಂದೂರಿನಲ್ಲಿ ಸೆರೆ ಹಿಡಿದಿರುವ ಘಟನೆ ನಡೆದಿದೆ.
ಕಳವು ಮಾಡಲಾಗಿದೆ ಎನ್ನಲಾಗಿದ್ದ ಕಾರಿನಲ್ಲಿ ಆರೋಪಿ ಇಬ್ಬರು ಮಹಿಳೆಯರ ಜೊತೆ ಉಡುಪಿಯತ್ತ ಬರುತ್ತಿದ್ದ ಮಾಹಿತಿ ಪಡೆದ ಕಾರಿನ ಮಾಲೀಕ ಮತ್ತು ಭಟ್ಕಳ ಪೊಲೀಸರು ಬೆನ್ನಟ್ಟಿ ಬಂದಿದ್ದರು.
ಉಪ್ಪುಂದದ ನಂದನವನ ಬಳಿ ಮಹಿಳೆಯರನ್ನು ಕಾರಿನಿಂದ ಇಳಿಸಿ ಪರಾರಿಯಾಗಲು ಆರೋಪಿ ಯತ್ನಿಸಿದ್ದಾನೆ ಎಂದು ಹೇಳಲಾಗಿದೆ.
ಈ ವೇಳೆ ಸ್ಥಳೀಯರ ನೆರವಿನಿಂದ ಪೊಲೀಸರು ಕಾರು ಮತ್ತು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
- Advertisement -


