ಕಾರ್ಕಳ: ಮನೆಗಳ ಹಟ್ಟಿಗಳಿಂದ ಬೆಲೆಬಾಳುವ ಗೋವುಗಳನ್ನು ಕಳವು ಗೈದು ಮನೆ ಮಂದಿಗೆ ತಲಾವರು ತೋರಿಸಿ ಜೀವ ಬೆದರಿಕೆಯೊಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಬಿದಿರೆ ಪರಿಸರದಿಂದ ಮೂವರನ್ನು ಪೊಲೀಸರು ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ.
ಶಿರ್ಲಾಲು, ಅಜೆಕಾರು,ಕೆರ್ವಾಸೆ ಪರಿಸರದ ಮನೆಗಳ ಹಟ್ಟಿಗಳಿಂದ ಗೋವುಗಳನ್ನು ಕಳವು ಮಾಡಿ ಮನೆ ಮಂದಿಗೆ ತಲಾವರು ತೋರಿಸಿ ಅಶಾಂತಿ ಉಂಟುಮಾಡಿದ್ದರು. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮತ್ತೆ ಮೂವರನ್ನು ಬಂಧಿಸಿದ್ದಾರೆ.
ಕಾರ್ಕಳ ತಾಲೂಕಿನಲ್ಲಿ ನಿರಂತರವಾಗಿ ಗೋವುಗಳ ಕಳವು ನಡೆಯುತ್ತಿದ್ದು, ಇದರಲ್ಲಿ ಸ್ಥಳೀಯ ಬ್ರೋಕರ್ ಕೈಜೋಡಿಸಿರುವುದು ಇನ್ನಷ್ಟು ಇಂತಹ ಕೃತ್ಯ ನಡೆಯಲು ಕಾರಣವಾಗಿದೆ ಎಂದು ಹೇಳಲಾಗಿದೆ.
ಇನ್ನು ಶಿರ್ಲಾಲು ಪ್ರಕರಣದಲ್ಲಿ ಭಾಗಿಯಾಗಿದ್ದ ಬ್ರೋಕರ್ ಕಡ್ತಲದ ಸತೀಶ್ ನಾಯ್ಕನನ್ನು ಪೊಲೀಸರು ಬಂಧಿಸಿದ್ದು ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಮೂಡಬಿದ್ರಿ ಗಂಟಾಲ್ಕಟ್ಟೆ ಪರಿಸರದ ಝಬೀರ್, ಸಲೀಮ್ ಎಂಬವರು ಪೊಲೀಸರು ವಿಚಾರಣೆಗೆ ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ. ಮತ್ತೊಬ್ಬ ಇಚ್ಚ ಈ ಕೃತ್ಯದಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ.
ಮೂಡಬಿದ್ರಿಯ ಗಂಟಾಲುಕಟ್ಟೆ,ಹಂಡೇಲು, ಜೋಕಟ್ಟೆ, ಬಜಪೆ, ಕಾರ್ಕಳದ ತೆಳ್ಳಾರು, ಈದುವಿನಲ್ಲಿ ಅಕ್ರಮ ಕಸಾಯಿಖಾನೆಗಳಿದ್ದು, ಗಂಟಾಲುಕಟ್ಟೆ, ಹಂಡೇಲು, ಜೋಕಟ್ಟೆ ಪರಿಸರದಲ್ಲಿ ಪ್ರಸ್ತುತವಾಗಿ ಅಕ್ರಮ ಕಸಾಯಿಖಾನೆ ಕಾರ್ಯಚರಿಸುತ್ತಿದೆ ಎಂದು ಹೇಳಲಾಗಿದೆ.