- Advertisement -
- Advertisement -
ಕಾರ್ಕಳ: ಎರಡು ಜ್ಯುವೆಲ್ಲರಿ ಶಾಪ್ ಗಳಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಹೆಬ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೆಬ್ರಿ ನೆಹರೂ ನಗರದ ಹರೀಶ ಹೆಗ್ಡೆ ಎಂಬವರ ಆಗುಂಬೆ -ಹೆಬ್ರಿ ರಸ್ತೆಯ ಬಳಿಯ ಗಣೇಶ ಜ್ಯುವೆಲ್ಲರ್ ಅಂಗಡಿಯ ಶೆಟರ್ ಬೀಗ ಮುರಿದು ಒಳಗಡೆ ನುಗ್ಗಿದ ದುಷ್ಕರ್ಮಿಗಳು, 5 ಕೆ.ಜಿ.
ಹೊಸ ಬೆಳ್ಳಿ ಹಾಗೂ ಒಂದು ಕೆ.ಜಿ ಹಳೆ ಬೆಳ್ಳಿ ಆಭರಣಗಳು, ಒಂದು ಪವನ್ ತೂಕದ 2 ಚಿನ್ನದ ಉಂಗುರಗಳನ್ನು ಕಳವು ಮಾಡಿದ್ದಾರೆ. ಇದರ ಒಟ್ಟು ಮೌಲ್ಯ 3.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಇನ್ನು ಕುಚ್ಚೂರಿನ ರುದ್ರಯ್ಯ ಆಚಾರ್ಯ ಎಂಬವರ ಹೆಬ್ರಿ ಕುಚ್ಚೂರು ರಸ್ತೆಯಲ್ಲಿರು ಶ್ರೀರಾಜರಾಜೇಶ್ವರಿ ಜುವೆಲ್ಲರ್ ಅಂಗಡಿಯ ಬೀಗ ಮುರಿದು ಒಳಗೆ ಪ್ರವೇಶಿಸಿದ ದುಷ್ಕರ್ಮಿಗಳು ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -