- Advertisement -
- Advertisement -
ಬೆಂಗಳೂರು: ಈಗಾಗಲೇ ಟಿಪ್ಪು ವಿಚಾರಕ್ಕೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಈಗಾಲೂ ಅದು ಬೂದಿ ಮುಚ್ಚಿದ ಕೆಂಡದಂತಿದೆ. ಇದರ ನಡುವೆ ಇದೀಗ ಕರ್ನಾಟಕ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಟಿಪ್ಪು ಬಗ್ಗೆ ಟ್ವೀಟ್ವೊಂದನ್ನು ಮಾಡಿದ್ದು ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ.
ತುಂಬಾ ಜನಕ್ಕೆ ಗೊತ್ತಿರಲಿಕ್ಕಿಲ್ಲ ಟಿಪ್ಪು ಸುಲ್ತಾನ್ ನ ಮೂಲ ಹೆಸರು ತಿಪ್ಪೇಸ್ವಾಮಿ ಎಂದು. ತಿಪ್ಪೇಸ್ವಾಮಿಯ ವರಪ್ರಸಾದವಾಗಿ ಟಿಪ್ಪುಸುಲ್ತಾನ್ ಜನಿಸಿದರು. ಹೀಗಾಗಿ, ಅವರಿಗೆ ಮೊದಲು ತಿಪ್ಪೇಸ್ವಾಮಿ ಅಂತಾ ಹೆಸರಿಟ್ಟಿದ್ದರು. ನಂತರ ಟಿಪ್ಪುವಾಗಿದೆ. ಆ ಭಾಗದ ಜನರೇ ಇದನ್ನು ಈಗಲೂ ಹೇಳುತ್ತಾರೆ ಎಂದು ಜಿ.ಸಿ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.
- Advertisement -