- Advertisement -
- Advertisement -
ಮಂಜೇಶ್ವರ : ಮಂಜೇಶ್ವರ ಸಮೀಪದ ಪಾವೂರಿ ನಲ್ಲಿ ಬೆಳಗಾವಿ ಮೂಲದ ಕಾರ್ಮಿಕರೋರ್ವರ ಮೃತದೇಹ ರಸ್ತೆ ಬದಿಯಲ್ಲಿ ಪತ್ತೆಯಾಗಿದೆ.
ಬೆಳಗಾವಿಯ ಬಸಪ್ಪ (63) ಮೃತಪಟ್ಟವರು.
ದೇಹದಲ್ಲಿ ಗಾಯಗಳು ಕಂಡು ಬಂದಿದ್ದು, ರಕ್ತ ಹೆಪ್ಪು ಗಟ್ಟಿದ ಸ್ಥಿತಿಯಲ್ಲಿ ಕಂಡುಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಮಂಜೇಶ್ವರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇನ್ನು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
- Advertisement -