Friday, June 27, 2025
Homeಕರಾವಳಿಉಡುಪಿಕಾರ್ಕಳ: ಕೇಬಲ್‌ ವ್ಯವಹಾರ ಸಂಬಂಧ ವ್ಯಕ್ತಿಗೆ ಜೀವ ಬೆದರಿಕೆ: 16 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸರ...

ಕಾರ್ಕಳ: ಕೇಬಲ್‌ ವ್ಯವಹಾರ ಸಂಬಂಧ ವ್ಯಕ್ತಿಗೆ ಜೀವ ಬೆದರಿಕೆ: 16 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸರ ವಶ

spot_img
- Advertisement -
- Advertisement -

ಕಾರ್ಕಳ : ಕೇಬಲ್ ವ್ಯವಹಾರಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವರಿಗೆ ಜೀವ ಬೆದರಿಕೆ ಒಡ್ಡಿದ ಪ್ರಕರಣದ ಆರೋಪಿ 16 ವರ್ಷದಿಂದ ತಲೆಮರೆಸಿಕೊಂಡಿದ್ದ ಬೆಳ್ತಂಗಡಿ ತಾಲೂಕು ಕಾಶಿಬೆಟ್ಟು ನಿವಾಸಿ ವೇಲು ಎಂಬಾತನನ್ನು ಕಾರ್ಕಳ ಪೊಲೀಸರು ಬೆಳ್ತಂಗಡಿ ಪೊಲೀಸರ ಸಹಕಾರದಿಂದ ಜೂ. 13ರಂದು ವಶಕ್ಕೆ ಪಡೆದಿದ್ದಾರೆ.

ಈತ ಕಾರ್ಕಳದಲ್ಲಿ ಕೇಬಲ್ ವ್ಯಾಪಾರ ನಡೆಸುತ್ತಿದ್ದ ಕುಕ್ಕುಂದೂರು ಹುಡ್ಕೊ ನಿವಾಸಿ ಪ್ರಶಾಂತ್ ನಾಯಕ್ ಅವರಿಗೆ 2006ರಲ್ಲಿ ಚೂರಿ ತೋರಿಸಿ ಬೆದರಿಕೆ ಒಡ್ಡಿದ ಪ್ರಕರಣದ ಆರೋಪಿಯಾಗಿದ್ದ. ಬಳಿಕ ತಲೆಮರೆಸಿಕೊಂಡಿದ್ದ. ಕಾರ್ಕಳದ ನ್ಯಾಯಾಲಯವು ಆರೋಪಿಯ ದಸ್ತಗಿರಿಗಾಗಿ ಬಂಧನ ವಾರಂಟ್ ಹೊರಡಿಸಿತ್ತು. ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ವೇಲು ಜೂ. 13ರಂದು ಬೆಳ್ತಂಗಡಿಗೆ ಬಂದಿರುವ ಮಾಹಿತಿ ಪಡೆದ ಕಾರ್ಕಳ ಪೊಲೀಸರು ವಶಕ್ಕೆ ಪಡೆದರು. ಆರೋಪಿಯನ್ನು ಜೂ. 14ರಂದು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇದೇ ಪ್ರಕರಣದ ಇನ್ನಿಬ್ಬರು ಆರೋಪಿಗಳನ್ನು ಈ ಹಿಂದೆಯೇ ದಸ್ತಗಿರಿ ಮಾಡಲಾಗಿದೆ. ಡಿವೈಎಸ್ಪಿ ವಿಜಯಪ್ರಸಾದ್, ಸರ್ಕಲ್ ಇನ್‌ಸ್ಪೆಕ್ಟರ್ ಸಂಪತ್ ಕುಮಾರ್ ಮಾರ್ಗದರ್ಶನದಲ್ಲಿ ನಗರ ಠಾಣೆ ಎಸ್‌ಐ ಪ್ರಸನ್ನಕುಮಾರ್, ಅಪರಾಧ ವಿಭಾಗದ ಎಸ್‌ಐ ದಾಮೋದರ್, ಎಎಸ್ಐ ರಾಜೇಶ್ ಪಿ. ಎಚ್‌ಸಿ ಪ್ರಸನ್ನ ಹೆಗ್ಡೆ, ಸಿದ್ದರಾಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

- Advertisement -
spot_img

Latest News

error: Content is protected !!