- Advertisement -
- Advertisement -
ಪುತ್ತೂರು; ಟೆಂಪೋ ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುತ್ತೂರಿನ ಅರಿಯಡ್ಕದಲ್ಲಿ ನಡೆದಿದೆ.
ಅರಿಯಡ್ಕ ಗ್ರಾಮದ ಕುರಿಂಜ ಪೊನ್ನಳ್ತಡ್ಕ ದಿ.ಅಪ್ಪಯ್ಯ ಮಣಿಯಾಣಿ ಎಂಬವರ ಪುತ್ರ ಯಾದವ ಯಾನೆ ರವೀಂದ್ರ(45) ಮೃತ ದುರ್ದೈವಿ.
ಮಹೀಂದ್ರ ಮಿನಿ ಟೆಂಪೋ ಚಾಲಕರಾಗಿದ್ದು, ಜ.25ರಂದು ಅವರು ಮನೆಯಿಂದ ಸ್ವಲ್ಪ ದೂರ ಟೆಂಪೋ ನಿಲ್ಲಿಸಿ ಅಲ್ಲಿಯೇ ಪಕ್ಕದಲ್ಲಿರುವ ಮರದ ಗೆಲ್ಲಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಘಟನೆ ಕುರಿತು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಪರಿಶೀಲನೆ ನಡೆಸಿದ್ದಾರೆ.
- Advertisement -