- Advertisement -
- Advertisement -
ಕಾಸರಗೋಡು: ಭತ್ತದ ತಳಿ ಸಂರಕ್ಷಣೆಗಾಗಿ ಕಾಸರಗೋಡಿನ ಕೃಷಿಕ ಸತ್ಯನಾರಾಯಣ ಬೇಲೇರಿ ಅವರಿಗೆ 2024ನೇ ಸಾಲಿನ ಪದ್ಮಶ್ರೀ ಘೋಷಣೆಯಾಗಿದೆ.
50 ವರ್ಷ ವಯಸ್ಸಿನ ಸತ್ಯನಾರಾಯಣ 650ಕ್ಕೂ ಹೆಚ್ಚು ಭತ್ತದ ತಳಿಗಳನ್ನು ಸಂರಕ್ಷಣೆ ಮಾಡಿದ್ದಾರೆ.
ಸಾಂಪ್ರದಾಯಿಕ ಭತ್ತದ ತಳಿಗಳನ್ನು ಸಂರಕ್ಷಿಸುವ ಮೂಲಕ ಭತ್ತದ ತಳಿಗಳ ಸಂರಕ್ಷಕನಾಗಿ ಗುರುತಿಸಿಕೊಂಡಿರುವ ಸತ್ಯನಾರಾಯಣ ಅವರಿಗೆ ಇತರೇ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ಸತ್ಯನಾರಾಯಣ ಬೇಲೇರಿ ಸೇರಿ ಕೇರಳ ರಾಜ್ಯದ ಒಟ್ಟು 9 ಸಾಧಕರಿಗೆ ಪದ್ಮ ಪ್ರಶಸ್ತಿ ನೀಡಲಾಗಿದೆ.
- Advertisement -