- Advertisement -
- Advertisement -
ಹೈದರಾಬಾದ್: ದೇಶದಲ್ಲಿ ಮತ್ತೊಂದು ರಾಷ್ಟ್ರೀಯ ಪಕ್ಷದ ಉದಯವಾಗಿದೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಭಾರತ ರಾಷ್ಟ್ರ ಸಮಿತಿ ಪಕ್ಷವನ್ನು ಇಂದು ಘೋಷಣೆ ಮಾಡಿದ್ದಾರೆ
ತೆಲಂಗಾಣದ ವಾರಂಗಲ್ ನಲ್ಲಿ ವಿಜಯ ದಶಮಿ ದಿನವಾದ ಇಂದು ಹೊಸ ರಾಷ್ಟ್ರೀಯ ಪಕ್ಷದ ಘೋಷಣೆ ಮಾಡಲಾಗಿದೆ. ಹೊಸ ಪಕ್ಷ ಘೋಷಣೆ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಕೂಡಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಮಾರಸ್ವಾಮಿ 20 ಜೆಡಿಎಸ್ ಶಾಸಕರ ಜೊತೆ ನಿನ್ನೆಯೇ ವಿಶೇಷ ವಿಮಾನದ ಮೂಲಕ ಹೈದರಾಬಾದ್ ಗೆ ತೆರಳಿದ್ದರು. ಹೊಸ ಪಕ್ಷ ಘೋಷಣೆ ಕುರಿತಾಗಿ ಇತ್ತೀಚೆಗೆ ಚಂದ್ರಶೇಖರ ರಾವ್, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮತ್ತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಜೊತೆಗೆ ಚರ್ಚಿಸಿದ್ದರು.
- Advertisement -