Thursday, June 4, 2026
HomeUncategorizedಬಂಟ್ವಾಳ: ಸುಳ್ಳ ಮಲೆ ತೀರ್ಥ ಸ್ನಾನಕ್ಕೆ ಪೂರ್ವಭಾವಿಯಾಗಿ ನೆರವೇರಿದ ಬಿದಿರಿನ ಕೇರ್ಪು ಇಡುವ ಸಂಪ್ರದಾಯ.

ಬಂಟ್ವಾಳ: ಸುಳ್ಳ ಮಲೆ ತೀರ್ಥ ಸ್ನಾನಕ್ಕೆ ಪೂರ್ವಭಾವಿಯಾಗಿ ನೆರವೇರಿದ ಬಿದಿರಿನ ಕೇರ್ಪು ಇಡುವ ಸಂಪ್ರದಾಯ.

- Advertisement -
- Advertisement -

ಬಂಟ್ವಾಳ: ಸೋಣ ಅಮವಾಸ್ಯೆಯ ದಿನದಿಂದ  ಬಾದ್ರಪದ ಶುಕ್ಲ ಚೌತಿ ಹಬ್ಬದ ದಿನದವರೆಗೆ ಸುಳ್ಳ ಮಲೆ ತೀರ್ಥ ಸ್ನಾನಕ್ಕೆ ಪೂರ್ವಭಾವಿಯಾಗಿ ಬಿದಿರಿನ ಕೇರ್ಪು ( ಏಣಿ) ಇಡುವ ಸಂಪ್ರದಾಯ ಸೆಪ್ಟೆಂಬರ್ 2 ರಂದು ನಡೆಯಿತು.

ಅನಾಧಿಕಾಲದಿಂದ ನಡೆದು ಬಂದ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು.ನಮ್ಮ ತುಳುನಾಡಿನಲ್ಲಿ ಅತ್ಯಂತ ಅಪರೂಪದ ವಿಶಿಷ್ಟ ತೀರ್ಥ ಕ್ಷೇತ್ರ ಎನಿಸಿದ ಐತಿಹಾಸಿಕ ಧಾರ್ಮಿಕ ಹಿನ್ನೆಲೆಯುಳ್ಳ  ಸುಳ್ಳಮಲೆ  ಗುಹಾ ತೀರ್ಥಕ್ಕೆ  ಪ್ರಾರ್ಥನೆ ಸಲ್ಲಿಸಿ,ಕೇರ್ಪು ಇಟ್ಟು  ದಾರ್ಮಿಕ ವಿಧಿ-ವಿದಾನವನ್ನು  ನೆರವೇರಿಸಿ ಅರಸು ಶ್ರೀ ಗುಡ್ಡೆಚಾಮುಂಡಿ  ಮತ್ತು ಪ್ರಧಾನಿ ಶ್ರೀ ಪಂಜುರ್ಲಿ ದೈವಗಳಿಗೆ ತಂಬಿಲ  ನೆರವೇರಿಸಲಾಯಿತು.ಈ ಸಂದರ್ಭದಲ್ಲಿ  ಗ್ರಾಮಸ್ತರು ಸೇರಿದಂತೆ ಊರ ಪರ ಊರಿನ ಭಕ್ತಾದಿಗಳು ಉಪಸ್ತಿತರಿದ್ದರು .ದಿನಾಂಕ 02-09-2024ನೇ ಸೋಮವಾರದಿಂದ ದಿನಾಂಕ 07-09-2024ನೇ ಶನಿವಾರ ಬಾದ್ರಪದ ಚೌತಿವರೆಗೆ ಗುಹಾ ತೀರ್ಥ ಸ್ನಾನಕ್ಕೆ ಭಕ್ತಾದಿಗಳಿಗೆ ಮುಕ್ತ ಅವಕಾಶ ಇದೆ.

ಫೋಟೋ, ವೀಡಿಯೋ ಚಿತ್ರೀಕರಣ ನಿಷೇಧ

ಇನ್ನು ಸುಳ್ಳಮಲೆ ಗುಹಾತೀರ್ಥದ ಒಳಭಾಗದಲ್ಲಿ ಫೋಟೋ, ವೀಡಿಯೋ  ತೆಗೆಯೋದನ್ನು  ನಿಷೇಧಿಸಲಾಗಿದ್ದು, ಭಕ್ತಾದಿಗಳು ಸಹಕರಿಸಬೇಕಾಗಿ ಮಾಣಿಗುತ್ತು ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಸಚಿನ್ ರೈ ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!