ಕೇರಳ; ಪೆಟ್ಶಾಪ್ವೊಂದರಿಂದ 15 ಸಾವಿರ ಬೆಲೆಯ ನಾಯಿ ಮರಿಯನ್ನು ಕದ್ದು ಇಬ್ಬರು ಉಡುಪಿ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಿಕ್ಕಿ ಬಿದ್ದ ಘಟನೆ ಕೇರಳದ ನೆಟ್ಟೂರಿನಲ್ಲಿ ನಡೆದಿದೆ.
ನಿಖಿಲ್ ಮತ್ತು ಶ್ರೇಯಾ ಎಂಬ ಇಬ್ಬರು ಉಡುಪಿ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಬೆಕ್ಕು ಮಾರುವ ನೆಪದಲ್ಲಿ ಕೇರಳದ ನೆಟ್ಟೂರಿನಲ್ಲಿರುವ ಪೆಟ್ಶಾಪ್ಗೆ ಬೈಕ್ನಲ್ಲಿ ಹೋಗಿದ್ದಾರೆ. ಬಳಿಕ ಪೆಟ್ಶಾಪ್ ಮಾಲೀಕನೊಂದಿಗೆ ಬೆಕ್ಕು ಮಾರುವ ಕುರಿತು ಮಾತನಾಡಿದ್ದಾರೆ. ಹೀಗೆ ಮಾತನಾಡುತ್ತಾ, ಅಂಗಡಿ ಮಾಲೀಕನ ಗಮನ ಬೇರೆಡೆಗೆ ಸೆಳೆದ ವಿದ್ಯಾರ್ಥಿಗಳಲ್ಲಿ ಒಬ್ಬಳಾದ ಶ್ರೇಯಾ ಎಂಬಾಕೆ ಅಲ್ಲಿ ಗೂಡಿನಲ್ಲಿ ಇಟ್ಟಿದ್ದ ನಾಯಿ ಮರಿಯನ್ನು ಕದ್ದಿದ್ದಾಳೆ. ಬಳಿಕ ಅದನ್ನು ಯಾರಿಗೂ ತಿಳಿಯದಂತೆ ನಿಖಿಲ್ನ ಹೆಲ್ಮೆಟ್ ಒಳಗೆ ಹಾಕಿ ಬಚ್ಚಿಟ್ಟಿದ್ದಾಳೆ.
ಅಂದ್ಹಾಗೆ ಶಾಪ್ ಮಾಲೀಕ ಮೂರು ನಾಯಿ ಮರಿಗಳನ್ನು ಮಾರಾಟ ಮಾಡಲೆಂದು ಬೇರೆಡೆಯಿಂದ ಖರೀದಿಸಿ ತನ್ನ ಶಾಪ್ಗೆ ತಂದಿಟ್ಟಿದ್ದ. ಅದರಲ್ಲಿ ಒಂದು ಮರಿಯನ್ನು ಆಲಪ್ಪುರದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಲು ಮುಂದಾಗಿದ್ದ. ಅಷ್ಟು ಮಾತ್ರವಲ್ಲದೆ, ಅಡ್ವಾನ್ಸ್ ಕೂಡ ತೆಗೆದುಕೊಂಡಿದ್ದ. ಶನಿವಾರದಂದು ವ್ಯಕ್ತಿ ನಾಯಿ ಮರಿಯನ್ನು ಖರೀದಿಸಲು ಬಂದಾಗ ಅಂಗಡಿ ಮಾಲೀಕ ಅದರ ಗೂಡಿನ ಬಳಿ ಹೋಗಿದ್ದಾನೆ. ಆದರೆ ಈ ವೇಳೆ ನಾಯಿ ಮರಿ ಇಲ್ಲದಿರುವುದನ್ನು ಕಂಡು ಆಗಿದ್ದಾನೆ. ಬಳಿಕ ಸಿಸಿಟಿವಿ ನೋಡಿದಾಗ ನಿಖಿಲ್ ಮತ್ತು ಶ್ರೇಯಾ ಕದ್ದಿರೋದು ಗೊತ್ತಾಗಿದೆ.
ಮಾಲೀಕ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಉಡುಪಿ ಮೂಲದ ಇಬ್ಬರು ಇಂಜಿನಿಯರ್ ವಿದ್ಯಾರ್ಥಿಗಳಾದ ನಿಖಿಲ್ ಮತ್ತು ಶ್ರೇಯಾಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.