Friday, May 10, 2024
Homeಕರಾವಳಿಉಡುಪಿಕೇರಳದ ಪೆಟ್​ಶಾಪ್​ವೊಂದರಿಂದ ನಾಯಿಮರಿ ಕದ್ದು ಸಿಕ್ಕಿ ಬಿದ್ದ ಉಡುಪಿ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಗಳು

ಕೇರಳದ ಪೆಟ್​ಶಾಪ್​ವೊಂದರಿಂದ ನಾಯಿಮರಿ ಕದ್ದು ಸಿಕ್ಕಿ ಬಿದ್ದ ಉಡುಪಿ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಗಳು

spot_img
- Advertisement -
- Advertisement -

ಕೇರಳ;  ಪೆಟ್​ಶಾಪ್​ವೊಂದರಿಂದ 15 ಸಾವಿರ ಬೆಲೆಯ ನಾಯಿ ಮರಿಯನ್ನು ಕದ್ದು  ಇಬ್ಬರು ಉಡುಪಿ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಿಕ್ಕಿ ಬಿದ್ದ ಘಟನೆ ಕೇರಳದ ನೆಟ್ಟೂರಿನಲ್ಲಿ ನಡೆದಿದೆ.

ನಿಖಿಲ್​ ಮತ್ತು ಶ್ರೇಯಾ ಎಂಬ ಇಬ್ಬರು ಉಡುಪಿ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಬೆಕ್ಕು ಮಾರುವ ನೆಪದಲ್ಲಿ ಕೇರಳದ ನೆಟ್ಟೂರಿನಲ್ಲಿರುವ ಪೆಟ್​ಶಾಪ್​ಗೆ ಬೈಕ್​ನಲ್ಲಿ ಹೋಗಿದ್ದಾರೆ. ಬಳಿಕ ಪೆಟ್​ಶಾಪ್​ ಮಾಲೀಕನೊಂದಿಗೆ ಬೆಕ್ಕು ಮಾರುವ ಕುರಿತು ಮಾತನಾಡಿದ್ದಾರೆ. ಹೀಗೆ ಮಾತನಾಡುತ್ತಾ, ಅಂಗಡಿ ಮಾಲೀಕನ ಗಮನ ಬೇರೆಡೆಗೆ ಸೆಳೆದ ವಿದ್ಯಾರ್ಥಿಗಳಲ್ಲಿ ಒಬ್ಬಳಾದ ಶ್ರೇಯಾ ಎಂಬಾಕೆ ಅಲ್ಲಿ ಗೂಡಿನಲ್ಲಿ ಇಟ್ಟಿದ್ದ ನಾಯಿ ಮರಿಯನ್ನು ಕದ್ದಿದ್ದಾಳೆ. ಬಳಿಕ ಅದನ್ನು ಯಾರಿಗೂ ತಿಳಿಯದಂತೆ ನಿಖಿಲ್​ನ ಹೆಲ್ಮೆಟ್​ ಒಳಗೆ ಹಾಕಿ ಬಚ್ಚಿಟ್ಟಿದ್ದಾಳೆ.


ಅಂದ್ಹಾಗೆ ಶಾಪ್​ ಮಾಲೀಕ ಮೂರು ನಾಯಿ ಮರಿಗಳನ್ನು ಮಾರಾಟ ಮಾಡಲೆಂದು ಬೇರೆಡೆಯಿಂದ ಖರೀದಿಸಿ ತನ್ನ ಶಾಪ್​ಗೆ ತಂದಿಟ್ಟಿದ್ದ. ಅದರಲ್ಲಿ ಒಂದು ಮರಿಯನ್ನು ಆಲಪ್ಪುರದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಲು ಮುಂದಾಗಿದ್ದ. ಅಷ್ಟು ಮಾತ್ರವಲ್ಲದೆ, ಅಡ್ವಾನ್ಸ್​ ಕೂಡ ತೆಗೆದುಕೊಂಡಿದ್ದ. ಶನಿವಾರದಂದು ವ್ಯಕ್ತಿ ನಾಯಿ ಮರಿಯನ್ನು ಖರೀದಿಸಲು ಬಂದಾಗ ಅಂಗಡಿ ಮಾಲೀಕ ಅದರ ಗೂಡಿನ ಬಳಿ ಹೋಗಿದ್ದಾನೆ. ಆದರೆ ಈ ವೇಳೆ ನಾಯಿ ಮರಿ ಇಲ್ಲದಿರುವುದನ್ನು ಕಂಡು ಆಗಿದ್ದಾನೆ. ಬಳಿಕ ಸಿಸಿಟಿವಿ ನೋಡಿದಾಗ ನಿಖಿಲ್​ ಮತ್ತು ಶ್ರೇಯಾ ಕದ್ದಿರೋದು ಗೊತ್ತಾಗಿದೆ.

ಮಾಲೀಕ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಉಡುಪಿ ಮೂಲದ ಇಬ್ಬರು ಇಂಜಿನಿಯರ್​ ವಿದ್ಯಾರ್ಥಿಗಳಾದ ನಿಖಿಲ್​ ಮತ್ತು ಶ್ರೇಯಾಳನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

- Advertisement -
spot_img

Latest News

error: Content is protected !!