Tuesday, May 14, 2024
Homeತಾಜಾ ಸುದ್ದಿಯುವತಿ ಮನೆಯವರು ಒಪ್ಪಿದ್ರೆ ಅವಳನ್ನೇ ಮದ್ವೆ ಆಗ್ತೀನಿ: ಪೊಲೀಸರ ಮುಂದೆ ಆಸಿಡ್ ನಾಗೇಶ್ ಹೇಳಿಕೆ

ಯುವತಿ ಮನೆಯವರು ಒಪ್ಪಿದ್ರೆ ಅವಳನ್ನೇ ಮದ್ವೆ ಆಗ್ತೀನಿ: ಪೊಲೀಸರ ಮುಂದೆ ಆಸಿಡ್ ನಾಗೇಶ್ ಹೇಳಿಕೆ

spot_img
- Advertisement -
- Advertisement -

ಬೆಂಗಳೂರು: ಯುವತಿ ಮೇಲೆ ಆಸಿಡ್ ‌ಹಾಕಿ ವಿಕೃತಿ ಮೆರೆದಿದ್ದ ನಾಗ ಪೊಲೀಸರ ಮುಂದೆ ತನ್ನ ವಿಕೃತಿ ಮನಸ್ಥಿತಿಯನ್ನು ಹೊರಹಾಕಿದ್ದಾನೆ. ಸಾರ್ ಆಸಿಡ್ ಹಾಕುವ ಹಿಂದಿನ ದಿನ ಅವಳನ್ನ ಭೇಟಿಯಾಗಿದ್ದೆ. ಏಳು ವರ್ಷದಿಂದ ಕಾಯ್ತಿದ್ದೀನಿ ಮದುವೆಯಾಗೋಣ ಅಂತಾ ಕೇಳಿದ್ರೆ, ಅಣ್ಣ ಅಂದುಬಿಟ್ಲು‌, ನನಗೆ ಮದುವೆ ಸೆಟ್ಟಾಗಿದೆ ಅಂದುಬಿಟ್ಲು, ಇದ್ರಿಂದ ನನಗೆ ಕೋಪ ಬಂದಿತ್ತು. ಅವತ್ತೇ ಆಯಸಿಡ್ ಖರೀದಿ ಮಾಡಿದ್ದೆ, ಆದ್ರೆ ಹಾಕಬೇಕು ಅನ್ಕೊಂಡಿರಲಿಲ್ಲ.

ಯಾವಾಗ ಅವರ ಮನೆಯವರು ಪ್ರವೋಕ್ ಮಾಡಿದ್ರೊ ಆಸಿಡ್ ಹಾಕ್ದೆ. ಈಗಲೂ ಹುಡುಗಿ ಮನೆಯವರು ಹೆಣ್ಣು ಕೊಡ್ತಾರ ಕೇಳಿ ನೋಡಿ ಸರ್ ಅವಳನ್ನ ಮದುವೆಯಾಗ್ತೀನಿ ಅಂತ ಪೊಲೀಸ್ರ ಮುಂದೆ ನಾಗ ಹೇಳಿಕೊಂಡಿದ್ದಾನಂತೆ. ಯಾಕೋ ಆಸಿಡ್ ಹಾಕಿದೇ ಅಂತಾ ಪೊಲೀಸ್ರು ಕೇಳಿದ್ರೆ. ನಾನು ಆಸಿಡ್ ಹಾಕಬೇಕು ಅಂತಾ ಅನ್ಕೊಂಡಿರಲಿಲ್ಲ ಸಾರ್. ಅವರ ಮನೆಯವರೇ ಊರು ತುಂಬಾ ಹೇಳ್ಕೊಂಡ್ ಬಂದ್ರು ಎಂದಿದ್ದಾನೆ.

ಆಸಿಡ್ ಹಾಕ್ತಾನಂತೆ…. ಆಸಿಡ್ ಹಾಕ್ತಾನಂತೆ…. ಅಂತಾ ಗುಲ್ಲೆಬ್ಬಿಸಿದ್ರು. ಯಾವಾಗ ಇವ್ರು ಎಲ್ಲಾ ಕಡೆ ಹೇಳ್ಕೊಂಡ್ ಬಂದ್ರೊ ಆಗ ಆಸಿಡ್ ಹಾಕ್ದೆ ಅಂತ ನಾಗ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.‌ ಇನ್ನೂ ಪೊಲೀಸ್ರ ಏನೊ ಇದು ಕೈ ಗಾಯ ಅಂದ್ರೆ, ನನ್ನ ಸುಟ್ಟ ಕೈ ನೋಡಿದಾಗಲೆಲ್ಲ ಅವಳು ಅಳೋದು ನೆನಪಾಗಬೇಕು ಸಾರ್ ಅದಕ್ಕೆ ಈ ಗಾಯ ಮಾಡಿಕೊಂಡಿದ್ದಿನಿ ಅಂತ‌ ಹೇಳಿದ್ದಾನೆ.

ಇನ್ನೂ ಇಷ್ಟು ದಿನ ತಲೆ ಮರೆಸಿಕೊಂಡಿದ್ದ ನಾಗ ಆಸಿಡ್ ಎರಚಲು ಕಾರಣ ಏನೂ ಎಂಬುದನ್ನು ಹೇಳಿಕೊಂಡಿದ್ದಾನೆ. ನೀವು ಹುಡುಕ್ತಿರ್ತೀರಾ ಅಂತಾ ಗೊತ್ತಿತ್ತು ಸರ್, ಮೂರ್ ಹೊತ್ತು ಊಟ , ಜೈಲಲ್ಲಿದ್ರೂ ಹಾಕ್ತಾರೆ ಧ್ಯಾನ ಮಾಡ್ಕೊಂಡ್ ಭಿಕ್ಷೆ ಬೇಡಿಕೊಂಡು ಬದುಕಿದ್ರೆ ಆಯ್ತು ಅಂತಾ ನಿರ್ಧಾರ ಮಾಡಿದ್ದೆ ಅಂದಿದ್ದಾನಂತೆ.

ಹುಡುಗಿ ಅಣ್ಣ ಅಂತಾ ಕರೆದಾಗ್ಲೆ ತಿರುವಣ್ಣಾಮಲೈಗೆ ಹೋಗುವ ನಿರ್ಧಾರ ಮಾಡಿದ್ದೆ. ಇದೇ ಕಾರಣಕ್ಕೆ ದೇವಸ್ಥಾನ ಸೇರಿ ಸೇವೆ ಮಾಡ್ತಿದ್ದೆ ಎಂದು ನಾಗ ಪೊಲೀಸ್ರ ಮುಂದೆ ಬಾಯಿ ಬಿಟ್ಟಿದ್ದಾನೆ.

- Advertisement -
spot_img

Latest News

error: Content is protected !!