Monday, May 6, 2024
Homeಕರಾವಳಿದ.ಕ.ಯುವ ಮೋರ್ಚಾ ವತಿಯಿಂದ ರಾಜ್ಯ ಮಟ್ಟದ ಕವನ ಸ್ಪರ್ಧೆ: ಕಡಬದ ಸಮ್ಯಕ್ತ್ ಜೈನ್ ದ್ವಿತೀಯ

ದ.ಕ.ಯುವ ಮೋರ್ಚಾ ವತಿಯಿಂದ ರಾಜ್ಯ ಮಟ್ಟದ ಕವನ ಸ್ಪರ್ಧೆ: ಕಡಬದ ಸಮ್ಯಕ್ತ್ ಜೈನ್ ದ್ವಿತೀಯ

spot_img
- Advertisement -
- Advertisement -

ಕಡಬ : ಖ್ಯಾತ ಕವಿ ದಿ. ಡಾ.ಸಿದ್ದಲಿಂಗಯ್ಯನವರ ನೆನಪಿಗಾಗಿ ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಯುವ ಮೋರ್ಚಾ ವತಿಯಿಂದ ರಾಜ್ಯ ಮಟ್ಟದ ಕವನ ಸ್ಪರ್ಧೆಯನ್ನು ವಿವಿಧ ವಿಭಾಗಗಳಲ್ಲಿ ಆಯೋಜಿಸಿತ್ತು . ಇದರಲ್ಲಿ ಕಾಲೇಜು ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಸಮ್ಯಕ್ತ್ ಜೈನ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಮಂಗಳೂರಿನ ಜಿಲ್ಲಾ ಅಂಬೆಡ್ಕರ್ ಭವನದಲ್ಲಿ ನ.13 ರಂದು ನಡೆದ ಭಾರತೀಯ ಜನತಾ ಪಾರ್ಟಿ ಎಸ್.ಸಿ. ಮೋರ್ಚಾ ದಕ್ಷಿಣ ಕನ್ನಡದ ಸಮಾವೇಶದಲ್ಲಿ ಸಚಿವರು-ಸಂಸದರು-ಶಾಸಕರ ಉಪಸ್ಥಿತಿಯಲ್ಲಿ ಬಹುಮಾನ ವಿತರಿಸಲಾಯಿತು.

ಹೊಸಂಗಡಿ ಬಸದಿ ಶ್ರೀ ಧರಣೇಂದ್ರ ಇಂದ್ರ ಹಾಗು ಮಂಜುಳಾ ದಂಪತಿಯ ಪುತ್ರರಾಗಿರುವ ಇವರು ಇದುವರೆಗೆ ಮೂರು ಕವನ ಸಂಕಲನವನ್ನು ಬರೆದು ಬಿಡುಗಡೆಗೊಳಿಸಿ ಸಾಹಿತ್ಯ ಲೋಕದಲ್ಲಿ ಮುಂದುವರೆಯುತ್ತಿದ್ದು , ಇವರು ಈಗಾಗಲೇ ಹಲವಾರು ರಾಜ್ಯ ಅಂತರ್ರಾಜ್ಯ ಮಟ್ಟದ ಬಹುಮಾನ-ಸನ್ಮಾನಗಳಿಗೆ ಭಾಜನರಾಗಿದ್ದಾರೆ.

ಪ್ರಸ್ತುತ ತೃತೀಯ ವರ್ಷದ ಪದವಿ ವಿದ್ಯಾಭ್ಯಾಸವನ್ನು ನೆಲ್ಯಾಡಿ ಸಾಫಿಯೆನ್ಶಿಯಾ ಬೆಥನಿ ಕಾಲೇಜು ಇಲ್ಲಿ  ಮುಂದುವರಿಸುತ್ತಿದ್ದಾರೆ .

- Advertisement -
spot_img

Latest News

error: Content is protected !!