Wednesday, June 24, 2026
Homeಕರಾವಳಿರಾಜ್ಯ ಸಚಿವ ಸಂಪುಟದಿಂದ ಮಂಗಳೂರಿನ ಬಜ್ಜೆಯಲ್ಲಿ ಹಜ್ ಭವನ ನಿರ್ಮಿಸಲು ಒಪ್ಪಿಗೆ

ರಾಜ್ಯ ಸಚಿವ ಸಂಪುಟದಿಂದ ಮಂಗಳೂರಿನ ಬಜ್ಜೆಯಲ್ಲಿ ಹಜ್ ಭವನ ನಿರ್ಮಿಸಲು ಒಪ್ಪಿಗೆ

- Advertisement -
- Advertisement -

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಸಿದ ರಾಜ್ಯ ಸಚಿವ ಸಂಪುಟವು ಮಂಗಳೂರು ತಾಲೂಕಿನ ಬಜ್ಜೆಯಲ್ಲಿ ಹಜ್ ಭವನ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ.

ಮಂಗಳೂರು ತಾಲೂಕಿನ ಬಜ್ಜೆಯಲ್ಲಿ 1.86 ಎಕರೆ ಜಮೀನಿನಲ್ಲಿ ಅಂದಾಜು 20 ಕೋ.ರೂ. ವೆಚ್ಚದಲ್ಲಿ ಕಾಮಗಾರಿ ಅನುಷ್ಠಾನಗೊಳಿಸಲು ಕರ್ನಾಟಕ ಗೃಹ ಮಂಡಳಿಗೆ ಮತ್ತು ಚಾಲ್ತಿಯಲ್ಲಿರುವ ಸರಕಾರದ ಸುತ್ತೋಲೆ ಹಾಗೂ KTPP ನಿಯಮದಂತೆ ಟೆಂಡರ್‌ಗಳನ್ನು ಆಹ್ವಾನಿಸಲಾಗುತ್ತದೆ.

ಕಾಮಗಾರಿಯನ್ನು ಅನುಷ್ಠಾನಗೊಳಿಸಲು ಸರಕಾರದ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.

- Advertisement -

Latest News

error: Content is protected !!