Sunday, May 19, 2024
Homeಕರಾವಳಿಕಬಕ ಶ್ರೀಮಹಾದೇವಿ ಯುವಕ ಮಂಡಲದ ವತಿಯಿಂದ ಧನಸಹಾಯ

ಕಬಕ ಶ್ರೀಮಹಾದೇವಿ ಯುವಕ ಮಂಡಲದ ವತಿಯಿಂದ ಧನಸಹಾಯ

spot_img
- Advertisement -
- Advertisement -

ವಿಟ್ಲ: ಕಳೆದೆರಡು ತಿಂಗಳಿನಿಂದ ಅನಾರೋಗ್ಯದಿಂದ ಬಳಲಿ ಇತ್ತೀಚೆಗೆ ನಿಧನರಾದ ಕಬಕ ಶ್ರೀ ಮಹಾದೇವಿ ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಕರುಣಾಕರ ಭಂಡಾರಿಯವರ ಚಿಕಿತ್ಸಾ ವೆಚ್ಚಕ್ಕಾಗಿ ಸಂಗ್ರಹಿಸಿದ 85,000 ರೂಪಾಯಿಯನ್ನು ಅವರ ಪತ್ನಿ ಕುಸುಮರವರಿಗೆ ಕಬಕ ಶ್ರೀ ಮಹಾದೇವಿ ಯುವಕ ಮಂಡಲದ ಪದಾಧಿಕಾರಿಗಳು ಹಸ್ತಾಂತರ ಮಾಡಿದರು.

ಅಸೌಖ್ಯದ ಹಿನ್ನೆಲೆಯಲ್ಲಿ ಕರುಣಾಕರ ರವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸುಮಾರು ಎರಡು ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಖರ್ಚು ಸುಮಾರು ಹತ್ತು ಲಕ್ಷರೂಪಾಯಿ ದಾಟಿದ್ದು, ಈ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಸಹಕರಿಸುವ ನಿಟ್ಟಿನಲ್ಲಿ ಕಬಕ ಶ್ರೀ ಮಹಾದೇವಿ ಯುವಕ ಮಂಡಲದ ಪದಾಧಿಕಾರಿಗಳು ಹಣ ಸಂಗ್ರಹಿಸಿ ಇದೀಗ ಅವರ ಪತ್ನಿಗೆ ಹಸ್ತಾಂತರ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಜಯಪ್ರಕಾಶ್ ಆಲದಗುಂಡಿ, ಕಾರ್ಯದರ್ಶಿ ಕಿರಣ್ ಅಡ್ಯಾಲು,ಮಾಜಿ ಅಧ್ಯಕ್ಷರಾದ ಜಯರಾಮ್ ನೆಕ್ಕರೆ, ಇಡ್ಕಿದು ಸೇವಾ ಸಹಕಾರಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷರು ಕೃಷ್ಣಪ್ಪ ಅಡ್ಯಾಲು, ಶ್ರೀ ಮಹಾದೇವೀ ವಿಶ್ವಸ್ಥ ಮಂಡಳಿಯ ಕೋಶಾಧಿಕಾರಿ ಜತ್ತಪ್ಪ ಗೌಡ ಅಡ್ಯಾಲು, ಸದಸ್ಯರು ಬಾಲಕೃಷ್ಣ ಪೋಳ್ಯ, ಲೋಕೇಶ್ ಬಾಕಿಮಾರ್, ಸತೀಶ್ ಕಬಕ, ಲಕ್ಷ್ಮೀಶ್ ಕಜೆ, ಪ್ರಕಾಶ್ ಅಡ್ಯಾಲು, ಕಾಂತಪ್ಪ ಗೌಡ ಅಡ್ಯಾಲು, ಶಶಿಕುಮಾರ್ ಅಡ್ಯಾಲು, ಚಂದ್ರಹಾಸ್ ಕರಾಯ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!