Friday, May 3, 2024
Homeಕರಾವಳಿಸಾಮಾಜಿಕ ಜಾಲತಾಣದಲ್ಲಿ ರಾಮನ ಬಗ್ಗೆ ಪೋಸ್ಟ್ ಹಾಕಿದ ಯುವಕ: ಉಪ್ಪಿನಂಗಡಿಯಲ್ಲಿ ಯುವಕನ ಮನೆ ಮುಂದೆ SDPI...

ಸಾಮಾಜಿಕ ಜಾಲತಾಣದಲ್ಲಿ ರಾಮನ ಬಗ್ಗೆ ಪೋಸ್ಟ್ ಹಾಕಿದ ಯುವಕ: ಉಪ್ಪಿನಂಗಡಿಯಲ್ಲಿ ಯುವಕನ ಮನೆ ಮುಂದೆ SDPI ಕಾರ್ಯಕರ್ತರ ಗೂಂಡಾಗಿರಿ, ವಿಡಿಯೋ ವೈರಲ್

spot_img
- Advertisement -
- Advertisement -

ಉಪ್ಪಿನಂಗಡಿ:  ಹಿಂದೂ ಯುವಕನೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಶ್ರೀರಾಮನ ಬಗ್ಗೆ ಪೋಸ್ಟ್ ಹಾಕಿದ್ದಕ್ಕೆ ಆತನ ಮನೆ ಬಳಿ ಬಂದು SDPI ಕಾರ್ಯಕರ್ತರು ಗೂಂಡಾಗಿರಿ ನಡೆಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಯುವಕ ಪೋಸ್ಟ್ ಹಾಕಿದ್ದನ್ನು ವಿರೋಧಿಸಿ ಎಸ್ ಡಿಪಿಐ ಕಾರ್ಯಕರ್ತರು ರಾತ್ರಿ ವೇಳೆ ಆತನ ಮನೆಯ ಗೇಟ್ ಬಳಿ ಬಂದು ಗಲಾಟೆ ಮಾಡಿದ್ದಾರೆ. ಅಲ್ಲದೇ ಅವಾಚ್ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಯುವಕನ ಹೆತ್ತವರ ಜೊತೆಯೂ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.ಅಲ್ಲದೇ ಯುವಕನಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಸದ್ಯ ಎಸ್ ಡಿಪಿಐ ಕಾರ್ಯಕರ್ತರ ಗಲಾಟೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಘಟನೆಯ ಬಗ್ಗೆ ಗೊತ್ತಾಗುತ್ತಿದ್ದಂತೆ ಹಿಂ.ಜಾ.ವೇ.ಪುತ್ತೂರು ಜಿಲ್ಲಾ ಪ್ರಮುಖರು ಯುವಕನ ಮನೆಗೆ ತೆರಳಿ ಯುವಕನಿಗೆ ಧೈರ್ಯ ತುಂಬಿದ್ದಾರೆ. ಅಲ್ಲದೇ  ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

- Advertisement -
spot_img

Latest News

error: Content is protected !!