- Advertisement -
- Advertisement -
ಮಂಗಳೂರು; ದೇಶದಾದ್ಯಂತ ಸದ್ದು ಮಾಡಿರುವ ಸೌಜನ್ಯ ಕೊಲೆ ಪ್ರಕರಣದಕಥಾ ಹಂದರವನ್ನು ಇಟ್ಟುಕೊಂಡು ಸಿನಿಮಾವೊಂದು ಇದೀಗ ಸೆಟ್ಟೇರಲು ಸಿದ್ಧವಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಿನಿಮಾಗಾಗಿ ಟೈಟಲ್ ನೋಂದಣಿಯಾಗಿದೆ.‘ಸ್ಟೋರಿ ಆಫ್ ಸೌಜನ್ಯ’ ಟೈಟಲ್ ನೋಂದಣಿ ಆಗಿದೆ.ಅನ್ನೋ ನಿರ್ದೇಶಕ ಸೌಜನ್ಯ ಕಥೆಯ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಇನ್ನು ಈ ಚಿತ್ರ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಕಥಾಹಂದವನ್ನು ಒಳಗೊಂಡಿದೆ. ಈ ಚಿತ್ರ ಕನ್ನಡದಲ್ಲಿ ಮಾತ್ರ ಬರಲಿದೆ ಎನ್ನಲಾಗಿದೆ.
ಪ್ರಕರಣದ ಆರೋಪಿಯಾಗಿದ್ದ ಸಂತೋಷ್ ರಾವ್ 11 ವರ್ಷಗಳ ಬಳಿಕ ನಿರ್ದೋಷಿ ಎಂದು ಸಿಬಿಐ ಕೋರ್ಟ್ ಮೊನ್ನೆಯಷ್ಟೇ ತೀರ್ಪು ನೀಡಿದೆ. ಹೀಗಿರುವಾಗಲೇ ಪ್ರಕರಣ ಮತ್ತೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಇದೀಗ ಸಿನಿಮಾ ಮಾಡಲು ಟೈಟಲ್ ರಿಜಿಸ್ಟರ್ ಆಗಿದೆ.
- Advertisement -