- Advertisement -
- Advertisement -
ಹಾಸನ: ತಾಯಿ ಮಗ ಇಬ್ಬರು ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಒಟ್ಟಿಗೆ ಬರೆದು ಉತ್ತೀರ್ಣರಾಗಿರುವ ಅಪರೂಪ ಪ್ರಸಂಗ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮೀಪುರ ಗ್ರಾಮದ ಸಿ.ಎನ್ ತೀರ್ಥ ಎನ್ನುವವರು ವೈಯಕ್ತಿಕ ಕಾರಣದಿಂದ ಎಂಟನೇ ತರಗತಿ ಓದುತ್ತಿರುವಾಗ ಅರ್ಧಕ್ಕೆ ಶಿಕ್ಷಣ ನಿಲ್ಲಿಸಿದ್ದರು. ಪ್ರಸಕ್ತ ವರ್ಷ ಅವರ ಮಗ ಹೇಮಂತ್ 10ನೇ ತರಗತಿಯಾಗಿದ್ದು, ವಿದ್ಯಾಭ್ಯಾಸದ ಮೇಲಿನ ಒಲವಿನಿಂದ ತೀರ್ಥ ಕೂಡ ಈ ಬಾರಿ ಮಗನೊಂದಿಗೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾರೆ.
ಮಗನ ಜೊತೆ ತಾವೂ ಕೂಡ ಸತತ ಅಭ್ಯಾಸ ಮಾಡಿದ ತೀರ್ಥ ಅವರು 235 ಅಂಕ ಪಡೆದು ಪಾಸಾಗಿದ್ದಾರೆ. ಇನ್ನು ಅವರ ಮಗ ಹೇಮಂತ್ 562 ಅಂಕ ಪಡೆದು ಉತ್ತೀರ್ಣನಾಗಿದ್ದಾನೆ.
- Advertisement -