ಮುಂಬೈ: ಮಾವನ ಪ್ರೇತ ಬಾಧೆ ಇದೆಯೆಂದು ಹೇಳಿ ಮಂತ್ರವಾದಿಯೊಬ್ಬ 16 ವರ್ಷದ ಯುವತಿಯನ್ನು ಕಾಡಿಗೆ ಒಯ್ದು ಅತ್ಯಾಚಾರ ನಡೆಸಿದ ಘಟನೆ ಥಾಣೆಯ ಭೀವಂಡಿಯಲ್ಲಿ ನಡೆದಿದೆ. ಮಂತ್ರವಾದಿಯ ಈ ಕೃತ್ಯಕ್ಕೆ ಹುಡುಗಿಯ ತಾಯಿಯೇ ಸಹಾಯ ಮಾಡಿದ್ದಾಳೆಂದು ಆರೋಪ ಕೇಳಿಬಂದಿದ್ದು ಮಂತ್ರವಾದಿ ಮತ್ತು ಹುಡುಗಿ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೃತ್ಯದ ಬಳಿಕ ಅವರಿಂದ ಬಿಡಿಸಿಕೊಂಡು ಹೊರಬಂದಿದ್ದ ಹುಡುಗಿ, ಈ ವಿಚಾರವನ್ನು ನಾರ್ಪೋಲಿ ಪೊಲೀಸ್ ಠಾಣೆಯಲ್ಲಿ ತಿಳಿಸಿದ್ದಾಳೆ. ತನಗೆ ತೀವ್ರ ಕುತ್ತಿಗೆ ನೋವಿತ್ತು. ತಾಯಿ ಜೊತೆ ಮಂತ್ರವಾದಿ ಬಳಿ ತೆರಳಿದಾಗ, ಆತ ನಿಂಗೆ ಮಾವನ ಪ್ರೇತ ಬಾಧೆಯಿದೆ ಎಂದು ಹೇಳಿದ್ದಾನೆ. ಅದನ್ನು ನಿವಾರಣೆ ಮಾಡಿಸ್ತೀನಿ ಎಂದು ತಾಯಿ ಜೊತೆಗೆ ಕಾಡಿಗೆ ಕರೆದೊಯ್ದು ರೇಪ್ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
ಹುಡುಗಿಯ ತಾಯಿ ಮತ್ತು ಮಂತ್ರವಾದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಪೋಕ್ಲೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಮಾನವ ಬಲಿ, ಮಾಟಗಾರಿಕೆ ನಿಷೇಧ ಕಾಯ್ದೆಯಡಿ ಕೇಸು ದಾಖಲು ಮಾಡಿದ್ದಾರೆ.