- Advertisement -
- Advertisement -
ಮಂಗಳೂರು: ಕೆಲದಿನಗಳಿಂದ ಗೋ ಸಾಗಾಟದಲ್ಲಿ ಸುದ್ದಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ವರ್ಗಾವಣೆ ಮಾಡಲಾಗಿದೆ.
ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಈ ಮೊದಲು ಬೆಳಗಾವಿ ಜಿಲ್ಲಾಪಂಚಾಯತ್ ನಲ್ಲಿ ಸಿಇಒ ಆಗಿ ಕಾರ್ಯನಿರ್ವಹಿಸಿದ್ದ ರಾಜೇಂದ್ರ ಕೆ.ವಿಯವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಿಂಧು ಬಿ ರೂಪೇಶ್ ಅವರು ಮುಂದಿನ ದಿನಗಳಲ್ಲಿ Electronic Delivery of Citizen Services (EDCS) ನ ಡೈರೆಕ್ಟರ್ ಆಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುವ ಸಂದರ್ಭದಲ್ಲಿ ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳದೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಅಂತ ಸಿಂಧು ಬಿ ರೂಪೇಶ್ ಅವರು ಹೇಳಿದ್ದರು, ಇದೇ ವೇಳೆ ಇದಕ್ಕೆ ಸಂಬಂದಪಟ್ಟಂತೆ ರಾಮಸೇನೆಯ ವಾಟ್ಸ್ ಆಯಪ್ ಗ್ರೂಪ್ವೊಂದರಲ್ಲಿ ಜಿಲ್ಲಾಧಿಕಾರಿಗೆ ಜೀವ ಬೆದರಿಕೆಯೊಡ್ಡುವ ಬರಹಗಳನ್ನು ಹಾಕಲಾಗಿತ್ತು
- Advertisement -