Sunday, May 5, 2024
Homeಕರಾವಳಿಬಿಗ್ ಬ್ರೇಕಿಂಗ್: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ವರ್ಗಾವಣೆ, ಡಾ.ರಾಜೇಂದ್ರ ಕೆ.ವಿ ನೂತನ...

ಬಿಗ್ ಬ್ರೇಕಿಂಗ್: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ವರ್ಗಾವಣೆ, ಡಾ.ರಾಜೇಂದ್ರ ಕೆ.ವಿ ನೂತನ ಡಿಸಿ

spot_img
- Advertisement -
- Advertisement -

ಮಂಗಳೂರು: ಕೆಲದಿನಗಳಿಂದ ಗೋ ಸಾಗಾಟದಲ್ಲಿ ಸುದ್ದಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ವರ್ಗಾವಣೆ ಮಾಡಲಾಗಿದೆ.

ರಾಜೇಂದ್ರ ಕೆ.ವಿ

ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಈ ಮೊದಲು ಬೆಳಗಾವಿ ಜಿಲ್ಲಾಪಂಚಾಯತ್ ನಲ್ಲಿ ಸಿಇಒ ಆಗಿ ಕಾರ್ಯನಿರ್ವಹಿಸಿದ್ದ ರಾಜೇಂದ್ರ ಕೆ.ವಿಯವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಿಂಧು ಬಿ ರೂಪೇಶ್ ಅವರು ಮುಂದಿನ ದಿನಗಳಲ್ಲಿ Electronic Delivery of Citizen Services (EDCS) ನ ಡೈರೆಕ್ಟರ್ ಆಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುವ ಸಂದರ್ಭದಲ್ಲಿ ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳದೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಅಂತ ಸಿಂಧು ಬಿ ರೂಪೇಶ್ ಅವರು ಹೇಳಿದ್ದರು, ಇದೇ ವೇಳೆ ಇದಕ್ಕೆ ಸಂಬಂದಪಟ್ಟಂತೆ ರಾಮಸೇನೆಯ ವಾಟ್ಸ್​ ಆಯಪ್ ಗ್ರೂಪ್​​ವೊಂದರಲ್ಲಿ ಜಿಲ್ಲಾಧಿಕಾರಿಗೆ ಜೀವ ಬೆದರಿಕೆಯೊಡ್ಡುವ ಬರಹಗಳನ್ನು ಹಾಕಲಾಗಿತ್ತು

- Advertisement -
spot_img

Latest News

error: Content is protected !!