- Advertisement -
- Advertisement -
ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಭಾಷಣ ಮಾಡುವ ಭರದಲ್ಲಿ ಯಡವಟ್ಟೊಂದನ್ನು ಮಾಡಿದ್ದಾರೆ. ಬೆಲೆ ಏರಿಕೆ ಖಂಡಿಸಿ ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಈ ವೇಳೆ ಬಿಜೆಪಿ ಸರ್ಕಾರವನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಹೇಳಿದರು.
ಕೂಡಲೇ ಕಾರ್ಯಕರ್ತರಿಂದ ಆಕ್ಷೇಪ ವ್ಯಕ್ತವಾದ ಹಿನ್ನಲೆಯಲ್ಲಿ ತಮ್ಮದೇ ಧಾಟಿಯಲ್ಲಿ ಯಾಕ್ರೀ ಗದ್ದಲ ಮಾಡ್ತೀರಾ, ಹೌದು ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ತಿದ್ದಿಕೊಂಡಿದ್ದಾರೆ.
ಇನ್ನು ಬೆಲೆ ಏರಿಕೆ ಖಂಡಿಸಿದ ಅವರು ನಮ್ಮ ಸರ್ಕಾರದಲ್ಲಿ ಅಗತ್ಯ ವಸ್ತುಗಳ ಬೆಲೆ ಈ ರೀತಿ ಏರಿಕೆ ಆಗಿರಲಿಲ್ಲ, ಒಳ್ಳೇ ದಿನ ಬರುತ್ತೇ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ಒಳ್ಳೆ ದಿನ ಯಾರಿಗೆ ಬಂದಿದೆ ಎಂಬುದನ್ನು ಹೇಳಲಿ ಎಂದ್ರು.
- Advertisement -