ಬೆಳ್ತಂಗಡಿ: ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಬಂದಾರಿನಲ್ಲಿ 30 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಗೋದಾಮು ಕಟ್ಟಡಕ್ಕೆ ಪಟೇಲರಾದ ಶ್ರೀ ಸೂರ್ಯನಾರಾಯಣ ಕುಡುಮತ್ತಾಯರವರು ಶಿಲಾನ್ಯಾಸ ನೆರವೇರಿಸಿದರು.
ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ ಗೌಡ,ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಉಪಾಧ್ಯಕ್ಷರಾದ ಅಶೋಕ್ ಪಾಂಜಾಳ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಉಮೇಶ್ ಪದ್ದಿಲ್ಲಾಯ , ನಿರ್ದೇಶಕರಾದ ಉದಯ್ ಭಟ್ ಕೊಳಬ್ಬೆ, ನಾರಾಯಣ ಗೌಡ, ರಾಜೀವ್ ರೈ, ಶಿಲಾವತಿ ಗೌಡ, ಉದಯ್ ಕುಮಾರ್ ಬಿಕೆ , ರಾಮಣ್ಣ ಮಡಿವಾಳ, ಕೇಶವ ಪೂಜಾರಿ, ಪಿಜಿನ ಮೊಗೇರ, ಪದ್ಮುಂಜಾ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಬಾಬು ಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಗೌಡ, ಚೇತನ್, ವಿಮಲ,ಪುಷ್ಪ, ಬಂದಾರು ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಮಮತಾ ಲೋಕೇಶ್, ಮಾಜಿ ತಾ.ಪಂ.ಸದಸ್ಯರಾದ ಕೃಷ್ಣಯ್ಯ ಆಚಾರ್ಯ, ಗುತ್ತಿಗೆದಾರರಾದ ಸುಜಯ್, ಇಂಜಿನಿಯರ್ ಕೇಶವ ಗೌಡ ಉಪಸ್ಥಿತರಿದ್ದರು. ಹಾಗೂ ಅರ್ಚಕರಾದ ದೇವಿಪ್ರಸಾದ್ ಹೊಳ್ಳ ಪೂಜಾ ವಿಧಿ ವಿಧಾನ ನೆರವೇರಿಸಿದರು.