- Advertisement -
- Advertisement -
ಉಡುಪಿ, ಜುಲೈ 01: ಪೂರ್ವ ಸಂಪ್ರದಾಯದಂತೆ ಶಯನೀ ಏಕಾದಶಿ ಪ್ರಯುಕ್ತ ಶ್ರೀ ಕೃಷ್ಣ ಮಠದಲ್ಲಿ ಸುದರ್ಶನ ಹೋಮ ಮತ್ತು ತಪ್ತ ಮುದ್ರಾಧಾರಣೆ ನೆರವೇರಿತು.
ಈ ವರ್ಷ ಕೊರೊನ ಭೀತಿಯ ಹಿನ್ನೆಲೆಯಲ್ಲಿ ಯತಿಗಳಿಗೆ ಮಾತ್ರ ತಪ್ತ ಮುದ್ರಾಧಾರಣೆ ನೆರವೇರಿತು.
ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರಿಗೆ, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರಿಗೆ ಹಾಗೂ ಹಾಗೂ ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರಿಗೆ ತಪ್ತ ಮುದ್ರಾಧಾರಣೆ ನಡೆಸಿದರು.
- Advertisement -