- Advertisement -
- Advertisement -
ಹುಬ್ಬಳ್ಳಿ:ಇಲ್ಲಿನ ಬಾಸೆಲ್ ಮಿಷನ್ ಚರ್ಚ್ ಬಳಿ ಮಾವನೂರ ಗ್ರಾಮಕ್ಕೆ ಹೋಗಲು ನಿಂತಿದ್ದ ಯುವತಿಯನ್ನು ಡ್ರಾಪ್ ಕೊಡುವುದಾಗಿ ಕರೆದೊಯ್ದು ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.19 ವರ್ಷದ ಯುವತಿ ನವೆಂಬರ್ 30 ರಂದು ಮಾವನೂರ ಗ್ರಾಮಕ್ಕೆ ಹೋಗುವ ವೇಳೆ ಘಟನೆ ನಡೆದಿದೆ.ಬೈಕ್ನಲ್ಲಿ ಆಗಮಿಸಿದ ಮಲ್ಲಿಕಾರ್ಜುನ ಹಾಗೂ ಆತನ ಸ್ನೇಹಿತ ಡ್ರಾಪ್ ಕೊಡುವುದಾಗಿ ಕರೆದುಕೊಂಡು ಹೋಗಿ ಮಾರ್ಗ ಮಧ್ಯೆ ಸ್ನೇಹಿತ ತೆರಳಿದ್ದು ನಂತರ
ಆರೋಪಿಯನ್ನು ಹುಬ್ಬಳ್ಳಿ ತಾಲೂಕಿನ ಮಾವನೂರ ಗ್ರಾಮದ ಮಲ್ಲಿಕಾರ್ಜುನ ಬಗಡಗೇರಿ ಎಂದು ಗುರುತಿಸಲಾಗಿದೆ. ಪೊಲೀಸರು ಈತನನ್ನು ವಶಕ್ಕೆ ಪಡೆದುಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದ ಮಲ್ಲಿಕಾರ್ಜುನ ಅತ್ಯಾಚಾರ ಎಸಗಿದ್ದಾನೆ. ಬೈಕ್ ನಲ್ಲಿ ವಾಪಸ್ ಕರೆದುಕೊಂಡು ಬರುವಾಗ ಅಪಘಾತವಾಗಿದ್ದು ಗಾಯಗೊಂಡ ಯುವತಿ ನಂತರ ಈ ಕುರಿತು ಮಾಹಿತಿ ನೀಡಿದ್ದಾಳೆ.
- Advertisement -