Tuesday, April 16, 2024
Homeತಾಜಾ ಸುದ್ದಿದ್ವಿತೀಯ ಪಿಯುಸಿ ಪರೀಕ್ಷೆ ಸದ್ಯಕ್ಕೆ ರದ್ದು : ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ

ದ್ವಿತೀಯ ಪಿಯುಸಿ ಪರೀಕ್ಷೆ ಸದ್ಯಕ್ಕೆ ರದ್ದು : ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ

spot_img
- Advertisement -
- Advertisement -

ಬೆಂಗಳೂರು:  ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಈ ಬಾರಿ ರದ್ದು ಮಾಡಲಾಗಿದೆ ಎಂದು ಎಂದು ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ವಿಷಯ ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಈಗ ಮಾಡದೇ ಇರುವುದಕ್ಕೆ ತೀರ್ಮಾನ ತೆಗೆದುಕೊಂಡಿದ್ದೇವೆ. ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ ಇಲ್ಲದೆನೇ ಯಾವ ರೀತಿ ಗ್ರೇಡಿಂಗ್‌ ಕೊಡಬಹುದು, ಕಲಿಕಾ ಮಟ್ಟದ ಬಗ್ಗೆ ಯೋಚನೆ ಮಾಡಿದ್ದೇವೆ. ರದ್ದು ಮಾಡಿದ ರಾಜ್ಯಗಳನ್ನು ಸಂಪರ್ಕ ಮಾಡಿ ರಿಸಲ್ಟ್‌ ಹೇಗೆ ಮಾಡುತ್ತೀರಿ ಎಂದು ಕೇಳಿದ್ದೇವೆ. ಯಾರು ಕೂಡ ತೆಗೆದುಕೊಳ್ಳಬಹುದಾದ ಮಾನದಂಡದ ಬಗ್ಗೆ ಖಚಿತತೆ ಇಲ್ಲ. ಮುಂದೆ ಯೋಚನೆ ಮಾಡುತ್ತೇವೆ ಎಂದಿದ್ದಾರೆ.

ಆದರೆ ನಮ್ಮ ರಾಜ್ಯದಲ್ಲಿ ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಆ ಎಲ್ಲಾ ಮಕ್ಕಳಿಗೆ ಕಳೆದ ವರ್ಷ ಮೊದಲ ವರ್ಷದ ಪಿಯುಸಿಯನ್ನು ಡಿಸ್ಟ್ರಿಕ್ಟ್‌ ಲೆವೆಲ್‌ ಆಗಿ ಎದುರಿಸಿದ್ದರು. ಅದರ ಆಧಾರದ ಮೇಲೆ ಗ್ರೇಡಿಂಗ್‌ ಕೊಡುತ್ತೇವೆ. ಈ ಗ್ರೇಡೇಷನ್‌ ಸಮಾಧಾನ ಇಲ್ಲ, ತುಂಬಾ ಓದಿದ್ದೇನೆ. ತುಂಬಾ ಪರಿಶ್ರಮ ಪಟ್ಟಿದ್ದೇನೆ ಎನ್ನುವ ಮಕ್ಕಳ ಸಂಖ್ಯೆ ಇದೆ. ಈ ರೀತಿ ಮಕ್ಕಳು ವ್ಯಕ್ತ ಮಾಡಿದರೆ ಕೋವಿಡ್‌ ಮುಗಿದ ಮೇಲೆ ಆ ಮಕ್ಕಳಿಗೆ ಪರೀಕ್ಷೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತೇವೆ. ಈಗ ದ್ವಿತೀಯ ಪಿಯುಸಿ ಮಕ್ಕಳು ಪ್ರಮೋಟೆಡ್‌ ಎಂದು ಮಾಡಿದ್ದೇವೆ. ಬೇರೆ ಬೇರೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡವರು ಚಿಂತಿಸುವ ಅಗತ್ಯವಿಲ್ಲ ಎಂದಿದ್ದಾರೆ.

- Advertisement -
spot_img

Latest News

error: Content is protected !!